ಕರಾವಳಿ

ಯಡಿಯೂರಪ್ಪರಿಗೆ ಕ್ಲಿನ್ ಚಿಟ್ : ಪ್ರಸಾದ ಅತ್ತವಾರ ನೇತ್ರತ್ವದಲ್ಲಿ ಸಂಭ್ರಮಚಾರಣೆ

Pinterest LinkedIn Tumblr

prasad_attavara_1

ಮಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಗಣಿಕಪ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ದೋಷಮುಕ್ತ ಎಂದು ತೀರ್ಪು ನೀಡಿದ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಬಿಜೆಪಿ ಮುಖಂಡ ಪ್ರಸಾದ ಅತ್ತವಾರ ಮತ್ತು ಅವರ ಬೆಂಬಲಿಗರು ಬುಧವಾರ ಸಂಜೆ ಮಂಗಳೂರಿನ ಸಕ್ಯೂ೯ಟ್ ಹೌಸ ಬಳಿ ಸಂಭ್ರಮಚಾರಣೆ ನಡೆಸಿದರು.

ಈ ಸಂದರ್ಭ ಪಕ್ಷದ ಮುಖಂಡರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಮತ್ತು ಯಡಿಯೂರಪ್ಪ ಅಭಿಮಾನಿಗಳು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಪಟ್ಟರು.

prasad_attavara_2 prasad_attavara_3 prasad_attavara_4 prasad_attavara_5 prasad_attavara_6

ನ್ಯಾಯಾಂಗದ ಘನತೆ ಹೆಚ್ಚಿಸಿದೆ : ಸಂಜೀವ ಮಠಂದೂರು

ಗಣಿ ಕಂಪೆನಿಗೆಪರವಾನಗಿ ನೀಡಿದಕ್ಕೆ ಪ್ರತಿಯಾಗಿ ಪ್ರೇರಣಾ ಟ್ರಸ್ಟ್ ಮೂಲಕ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂಬ ಕೇಸ್‌ಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲಿನ ಎಲ್ಲಾ ಆರೋಪವನ್ನು ಸಿಬಿಐ ವಿಶೇಷ ಕೋರ್ಟ್ ಖುಲಾಸೆಗೊಳಿಸಿರುವುದು ನ್ಯಾಯಾಂಗದ ಘನತೆಯನ್ನು ಹೆಚ್ಚಿಸಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಹೇಳಿದ್ದಾರೆ.

prasad_attavara_7 prasad_attavara_8 prasad_attavara_9

ಆರೋಪದಿಂದ ಮುಕ್ತರಾಗಿರುವುದು ಭಾರತೀಯ ಜನತಾ ಪಾರ್ಟಿ ಮತ್ತು ಕಾರ್ಯಕರ್ತರಿಗೆ ಹರ್ಷತಂದಿದೆ. ಮುಂಬರುವ ಚುನಾವಣೆಯಲ್ಲಿ ಭಾ.ಜ.ಪ. ಪಕ್ಷ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮತ್ತಷ್ಟು ಬಲಗೊಳ್ಳುವುದರೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೇರಲು ಇದು ಸಹಕಾರಿಯಾಗಲಿದೆ.

ವ್ಯಕ್ತಿಯ ಏಳ್ಗೆಯನ್ನು ಸಹಿಸದೇ ರಾಜಕೀಯ ಪ್ರೇರಿತ ಸುಳ್ಳು ಆರೋಪಗಳ ಮಾಡುವವರಿಗೆ ಈ ಪ್ರಕರಣ ಪಾಠವಾಗಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments are closed.