ಕರಾವಳಿ

ಬ್ರಹ್ಮಾವರ: ಅಂಚೆ ಕಛೇರಿ ಹಾಗೂ ವಸತಿ ಗೃಹದ ಬೀಗ ಒಡೆದು ಕನ್ನ ಹಾಕಲು ಯತ್ನ

Pinterest LinkedIn Tumblr

download-2

ಉಡುಪಿ: ಅಂಚೆ ಕಛೆರಿಯ ಬೀಗ ಒಡೆಯುವ ಸಲುವಾಗಿ ಯಾವುದೋ ಆಯುಧದಿಂದ ಪ್ರಯತ್ನಪಟ್ಟ ಕುರುಹುಗಳು ಬ್ರಹ್ಮಾವರದಲ್ಲಿ ನಡೆದಿದೆ.

ಶನಿವಾರ ಸಂಜೆ ಅಂಚೆ ಕಛೇರಿ ಬೀಗ ಹಾಕಿ ತೆರಳಿದ ವೇಳೆಯಿಂದ ಸೋಮವಾರ ಬೆಳಗ್ಗಿನ ಅವಧಿಯ ನಡುವೆ ಈ ಘಟನೆ ನಡೆದಿದೆ. ವಾರಂಬಳ್ಳಿ ಗ್ರಾಮದ ಬ್ರಹ್ಮಾವರದಲ್ಲಿರುವ ಅಂಚೆ ಕಚೇರಿಯ ಹಾಗೂ ಅಂಚೆ ಕಛೇರಿಯ ವಸತಿ ಗೃಹದ ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಯಾವುದೋ ಆಯುಧಗಳಿಂದ ಬಾಗಿಲಿನ ಬೀಗವನ್ನು ಒಡೆಯಲು ಪ್ರಯತ್ನ ಪಟ್ಟಿರುವುದು ಮೇಲ್ನೋಟಕ್ಕೆ ಸಾಭೀತಾಗಿದೆ. ಕಳ್ಳತನ ಪ್ರಯತ್ನದಿಂದ ಯಾವುದೇ ಸ್ವತ್ತಗಳು ಕಳವು ಆಗಿಲ್ಲ ಎನ್ನುವ ಬಗ್ಗೆ ಮಾಹಿತಿಯಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

(ಸಾಂದರ್ಭಿಕ ಚಿತ್ರ)

Comments are closed.