ಕರಾವಳಿ

ಚೈತ್ರಾ ಸೂಸೈಡ್ ಕೇಸ್: ಪೋಕ್ಸೋ ಕಾಯ್ದೆಯಡಿ ಮೂವರ ವಿರುದ್ಧ ಪ್ರಕರಣ

Pinterest LinkedIn Tumblr

ಉಡುಪಿ: ಉಡುಪಿ ಪುತ್ತೂರಿನ ಚಂದ್ರಶೇಖರ್ ಎನ್ನುವವರ ಪುತ್ರಿ ಚೈತ್ರಾ ಎಂಬಾಕೆ ಸೆ.28ರಂದು ಉಪ್ಪೂರಿನ ಸೇತುವೆಯಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂದಿಸಿದಂತೆ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

udupi_chaithra_suside-case-1

ತನ್ನ ಮಗಳ ಆತ್ಮಹತ್ಯೆಗೆ ಆಕೆ ಪ್ರೀತಿಸುತ್ತಿದ್ದ ಆದರ್ಶ್ ಹಾಗೂ ಆತನ ಸ್ನೇಹಿತರಾದ ಸಾಗರ ಮತ್ತು ಪವನ್ ನೇರ ಕಾರಣರಾಗಿದ್ದಾರೆಂದು ಚೈತ್ರಾಳ ತಂದೆ ಉಡುಪಿ ನಗರ ಠಾಣೆಯಲ್ಲಿ ದೂರು ನೀಡಿದ್ದರು. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಇನ್ನು ತನಿಖೆಯ ಬೆನ್ನಲ್ಲೇ ಬಿಲ್ಲವ ಸಮಾಜ ಚೈತ್ರಾ ಕುಟುಂಬಸ್ಥರಿಗೆ ನೈತಿಕ ಧೈರ್ಯ ತುಂಬಿ ಪೊಲೀಸ್ ಇಲಾಖೆಗೆ ತನಿಖೆ ಚುರುಕುಗೊಳಿಸಲು ಒತ್ತಡ ಹೇರಿತ್ತು. ಚೈತ್ರಾ ಅಪ್ರಾಪ್ತ ವಯಸ್ಕಳಾದ ಕಾರಣ ಪೋಕ್ಸೋ ಪ್ರಕರಣವನ್ನು ಆರೋಪಿತರ ಮೇಲೆ ಹಾಕಿ ಎಂದು ಮನವಿ ನೀಡಿದ್ದರಲ್ಲದೇ ಅದಕ್ಕೆ ಪೂರಕವಾದ ದಾಖಲೆಗಳನ್ನು ನೀಡಿದ್ದರು.

ಇದರೆಲ್ಲದರ ನಡುವೆ ಸದ್ಯ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದ್ದು ತಲೆಮರೆಸಿಕೊಂಡ ಆರೋಪಿಗಳ ಪತ್ತೆಗೆ ಪೊಲಿಸರು ತಂಡ ರಚಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Comments are closed.