ಕರಾವಳಿ

ಮಾಂಸಹಾರಕ್ಕೆ ವಿರೋಧವಿಲ್ಲ; ಯಾರೂ ಗೋಮಾಂಸ ಸ್ವೀಕರಿಸಬಾರದು: ಪೇಜಾವರ ಶ್ರೀ

Pinterest LinkedIn Tumblr

ಉಡುಪಿ: ಮಾಂಸಾಹಾರದ ಬಗ್ಗೆ ಸಚಿವ ಪ್ರಮೋದ್ ಮದ್ವರಾಜ್ ನೀಡಿರುವ ಹೇಳಿಕೆಗೆ ಪ್ರತಿಕ್ರೀಯಿಸಿದ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಪ್ರಮೋದ್ ಮದ್ವರಾಜ್ ಗೆ ಮಠ-ಧರ್ಮದ ಬಗ್ಗೆ ವಿಶೇಷ ಗೌರವ ಇದೆ. ದೇವರ ಬಗ್ಗೆ ವಿಶೇಷ ಭಕ್ತಿ ಇದೆ. ಈಗ ಈ ವಿಷಯ ಪ್ರಸ್ತುತ ಅಲ್ಲ ಎಂದು ಹೇಳಿದ್ದಾರೆ.

pejavara-swamiji

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು ಪ್ರಮೋದ್ ಹೇಳಿಕೆಗೆ ಪ್ರತಿಕ್ರೀಯೆ ನೀಡಲ್ಲ. ರಾಮ-ಕೃಷ್ಣರು ಏನು ಮಾಡಿದ್ದಾರೆ ಎಂದು ಸ್ಪಷ್ಟವಾಗಿ ಹೇಳಲು ಬರೋದಿಲ್ಲ. ಮಾಂಸಾಹಾರ ಸ್ವೀಕರಿಸಿದ ಬಗ್ಗೆ ಸ್ಪಷ್ಟ ಉಲ್ಲೇಖ ಇಲ್ಲ. ಎಲ್ಲಾ ಕ್ಷತ್ರೀಯರು ಮಾಂಸ ತಿನ್ನುತ್ತಿದ್ದರು. ವಾಲ್ಮಿಕಿ ಬೇಡರಾಗಿರುವಾಗ ಮಾಂಸ ಸ್ವೀಕರಿಸಿರಬಹುದು. ತಪಸ್ವಿಗಳಾದ ಮೇಲೆ ಮಾಂಸಾಹಾರ ಸ್ವೀಕಾರ ಮಾಡಿರಲಿಕ್ಕಿಲ್ಲ. ಈ ಹಿಂದೆ ಯಾರು ಏನು ಮಾಡಿದ್ದಾರೆ ಎಂಬುದು ಪ್ರಸ್ತುತ ಅಲ್ಲ. ನಾವು ಮಾಂಸಾಹಾರಕ್ಕೆ ವಿರೋಧ ಮಾಡಲ್ಲ. ಆದ್ರೆ ಗೋಮಾಂಸಕ್ಕೆ ವಿರೋಧ ಮಾಡ್ತಾ ಇದ್ದೇವೆ.ಯಾರೂ ಗೋಮಾಂಸ ಸ್ವೀಕರಿಸಬಾರದು ಎಂದರು.

Comments are closed.