ಕರಾವಳಿ

ಉಪ್ಪಿನಂಗಡಿ, ನೀರಕಟ್ಟೆ ಬಳಿ ಉರುಳಿ ಬಿದ್ದ ಗ್ಯಾಸ್ ಟ್ಯಾಂಕರ್ :ಚಾಲಕ,ಕ್ಲಿನರ್ ಅಪಾಯದಿಂದ ಪಾರು

Pinterest LinkedIn Tumblr

uppinagadi-tanker_palty

ಪುತ್ತೂರು: ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಲಿ ಗ್ಯಾಸ್ ಟ್ಯಾಂಕರೊಂದು ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ನೀರಕಟ್ಟೆ ಬಳಿ ರಾ ಹೆ 75ರಲ್ಲಿ ರಸ್ತೆ ಸಮೀಪದ ತೋಡಿಗೆ ಉರುಳಿ ಬಿದ್ದ ಘಟನೆ ನಡೆದಿದ್ದು,ಘಟನೆಯಲ್ಲಿ ಟ್ಯಾಂಕರ್‌ನ ಚಾಲಕ ಹಾಗೂ ಕ್ಲಿನರ್ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಭಾರತ ಪೆಟ್ರೋಲಿಯಂ ಕಾರ್ಪೊರೇಶನ್ (BPCL) ಸಂಸ್ಥೆಗೆ ಸೇರಿದ ಈ ಟ್ಯಾಂಕರ್‌‌ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದಾಗ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಉರುಳಿ ಬಿದ್ದ ಟ್ಯಾಂಕರ್‌ನಲ್ಲಿ ಖಾಲೆಯಾಗಿದ್ದ ಹಿನ್ನೆಲೆಯಲ್ಲಿ ಯಾವೂದೇ ಹೆಚ್ಚಿನ ಅನಾಹುತ ಸಂಭವಿಸಲಿಲ್ಲ. ಮಾತ್ರವಲ್ಲದೇ ಪಕ್ಕದ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ಯಾವೂದೇ ಅಡೆತಡೆ ಉಂಟಾಗಲಿಲ್ಲ. ಈ ರಸ್ತೆಯಲ್ಲಿ ವಾಹನ ಸಂಚಾರ ನಿರಾತಂಕವಾಗಿದೆ.

Comments are closed.