ಕರಾವಳಿ

ನಾವುಂದ-ಬಡಾಕರೆಯಲ್ಲಿ ಅಕ್ರಮ ಮರಳುಗಾರಿಕೆ ಮೇಲೆ ದಾಳಿ; ಮರಳು ತುಂಬಿದ ಲಾರಿ ವಶ

Pinterest LinkedIn Tumblr

ಕುಂದಾಪುರ: ನಾಡಾ-ಗುಡ್ಡೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಾಕರೆ ಎಂಬಲ್ಲಿ ಹೊಳೆ ದಡದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ಬೈಂದೂರು ವಿಶೇಷ ತಹಸಿಲ್ದಾರ್ ನೇತ್ರತ್ವ ದಾಳಿ ನಡೆದಿದ್ದು ಮರಳು ತುಂಬಿದ ಟಿಪ್ಪರ್ ವಶಕ್ಕೆ ಪಡೆಯಲಾಗಿದೆ.

kundapura_illegele_sand-mining-1 kundapura_illegele_sand-mining-2

ಬಡಾಕೆರೆ ಭಾಗದಲ್ಲಿ ಹಲವಾರು ಸಮಯಗಳಿಂದ ರಾತ್ರಿ ಹಗಲು ಎನ್ನದೇ ಎಗ್ಗಿಲ್ಲದೇ ಮರಳುಗಾರಿಕೆ ನಡೆಯುತ್ತಿದ್ದು ಈ ಬಗ್ಗೆ ಹಲವು ಬಾರೀ ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಅಂತೆಯೇ ಶುಕ್ರವಾರ ಮುಂಜಾನೆ ಬೈಂದೂರು ವಿಶೇಶ ತಹಶಿಲ್ದಾರ್ ಕಿರಣ್ ಗೌರಯ್ಯ ಅವರು ಸ್ಥಳಕ್ಕೆ ದಾಳಿ ನಡೆಸಿದ್ದು ಈ ವೇಳೆ ಮರಳು ತುಂಬಿದ ಟಿಪ್ಪರ್ ವಶಕ್ಕೆ ಪಡೆಯಲಾಗಿದೆ. ಹೊಳೆ ದಡದಲ್ಲಿ ಮರಳುಗಾರಿಕೆ ನಡೆಯುತ್ತಿರುವ ಕುರುಹುಗಳು ಅಧಿಕಾರಿಗಳಿಗೆ ಸಿಕ್ಕಿದ್ದು ಸ್ಥಳದಲ್ಲಿದ್ದ ಕಾರ್ಮಿಕರು ಉಳಿಯುವ ಬಿಡಾರದಲ್ಲಿ ಬೆಳಿಗ್ಗೆ ತಯಾರಿಸಿಟ್ಟ ಅಡುಗೆಗಳು ಕಾಣಸಿಕ್ಕಿದ್ದು ಬೆಳಿಗ್ಗೆಯೂ ಇಲ್ಲಿ ಕಾರ್ಮಿಕರಿದ್ದಿದ್ದು ಅಧಿಕಾರಿಗಳ ದಾಳಿ ವೇಳೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.

Comments are closed.