ಕರಾವಳಿ

ಶ್ರೀ ಕೃಷ್ಣ ಮಠಕ್ಕೆ ಮುತ್ತಿಗೆ ಹಾಕಿದ್ರೆ ಪೇಜಾವರ ಶ್ರೀ ಏನು ಮಾಡ್ತಾರೆ ಗೊತ್ತಾ?

Pinterest LinkedIn Tumblr

* ಮಠಕ್ಕೆ ರಕ್ಷಣೆ ಕೊಡುವುದು ಸರಕಾರದ ಜವಾಬ್ಧಾರಿ *

ಉಡುಪಿ: ಉಡುಪಿಯ ಕೃಷ್ಣ ಮಠಕ್ಕೆ ಮುತ್ತಿಗೆ ಹಾಕಿದ್ರೆ ನಾನು ಉಪವಾಸ ಕೂರುತ್ತೇನೆ ಎಂದು ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಘೋಷಿಸಿದ್ದಾರೆ. ಇತ್ತೀಚಿಗೆ ನಡೆದ ಉಡುಪಿ ಚಲೋ ಸಮಾವೇಶ ಸಂದರ್ಬದಲ್ಲಿ ಪಂಕ್ತಿ ಬೇಧ ವಿರೋಧಿಸಿ ಮಠಕ್ಕೆ ಮುತ್ತಿಗೆ ಹಾಕುವ ಘೋಷಣೆಯನ್ನು ಸಮಾವೇಶದಲ್ಲಿ ಮುಖಂಡರು ಮಾಡಿದ್ದರು.

pejavara-swamiji

ಕೃಷ್ಣ ಮಠದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪೇಜಾವರ ಶ್ರೀಗಳು ಚಲೋ ಉಡುಪಿಗೂ ಕೃಷ್ಣ ಮಠಕ್ಕೂ ಸಂಬಂಧ ಏನು? ಪ್ರವೀಣ್ ಪೂಜಾರಿ ಹತ್ಯೆ ಖಂಡಿಸಿ ಸಮಾವೇಶ ನಡೆದಿದೆ. ಆದ್ರೆ ವಿನಾ ಕಾರಣ ಸಮಾವೇಶದಲ್ಲಿ ಕೃಷ್ಣ ಮಠವನ್ನು ಎಳೆತರಲಾಗಿದೆ. ಇಲ್ಲಿನ ಪಂಕ್ತಿಬೇಧದ ಬಗ್ಗೆ ಮಾತನಾಡಿದ್ದಾರೆ. ಆದ್ರೆ ಉಡುಪಿಯ ಕೃಷ್ಣ ಮಠದಲ್ಲಿ ಯಾವುದೇ ಪಂಕ್ತಿ ಬೇಧ ನಡೆಯುತ್ತಿಲ್ಲ ಎಲ್ಲಾ ವರ್ಗದವರೂ ಸಹ ಭೋಜನ ಮಾಡುತ್ತಿದ್ದಾರೆ. ದಲಿತರು ಖುಷಿಯಲ್ಲಿ ಕೃಷ್ಣ ಮಠಕ್ಕೆ ಬರುತ್ತಿದ್ದಾರೆ. ಸಮಾವೇಶದಲ್ಲಿ ನನ್ನ ಬಗ್ಗೆಯೂ ಅಪಸ್ವರ ಎತ್ತಿದ್ದಾರೆ. ನನಗೆ ಇದು ನೋವುಂಟು ಮಾಡಿದೆ. ಕೃಷ್ಣ ಮಠಕ್ಕೆ ಮುತ್ತಿಗೆಯನ್ನು ಹಾಕುವ ಬಗ್ಗೆ ಘೋಷಣೆ ಮಾಡಿದ್ದಾರೆ. ಮುತ್ತಿಗೆ ಹಾಕಿದ್ರೆ ನಾನು ಉಪಾವಸ ಕೈಗೊಳ್ಳುತ್ತೇನೆ. ನನ್ನ ಜೊತೆ ನನ್ನ ಭಕ್ತರೂ ಬರಲಿದ್ದು ಇದರ ಪರಿಣಾಮ ಸರಕಾರಕ್ಕೆ ಬಿಟ್ಟಿದ್ದು ಎಂದರು.

ಲಿಂಗ ದೀಕ್ಷೆ ಪಡೆದವರ ಮನೆಯಲ್ಲಿ ಉಂಡರೆ ೭ಬಾರಿ ನಾಯಿ ಜನ್ಮ ಹೀಗೆಂದು ಬಸವಣ್ಣ ಹೇಳಿದ್ದರು ಬಸವಣ್ಣರಂತ ಮಹಾನುಭಾವರನ್ನು ನಿಂದಿಸಲು ಬುದ್ದಿಜೀವಿಗಳು ಸಿದ್ದರಿದ್ದಾರಾ? ಕೋಮು ಸೌಹಾರ್ದದ ನೆಪದಲ್ಲಿ ಹಿಂದೂ ಧರ್ಮದ ಟೀಕೆ ನಡೆಯುತ್ತಿದೆ. ಎಲ್ಲದಕ್ಕೂ ಬ್ರಾಹ್ಮಣರು ಕಾರಣ ಎಂದು ಬಿಂಬಿಸಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

Comments are closed.