ಕರಾವಳಿ

ಕೊಲೆಗೀಡಾದ ಭಾಸ್ಕರ ಶೆಟ್ಟಿಯ ಹೋಟೇಲ್ ಮ್ಯಾನೇಜರ್ ಗೆ ಕೊಲೆ ಬೆದರಿಕೆ

Pinterest LinkedIn Tumblr

Businessman_Bhaska-Shetty_Missing.

ಉಡುಪಿ: ಇತ್ತೀಚಿಗೆ ಕೊಲೆಯಾದ ಭಾಸ್ಕರ ಶೆಟ್ಟಿ ಅವರ ದುರ್ಗಾ ಇಂಟರ್ ನ್ಯಾಶನಲ್ ಹೋಟೇಲ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಗೆ ಕೊಲೆ ಬೆದರಿಕೆ ಒಡ್ಡಿದ ಪ್ರಕರಣ ಉಡುಪಿ ನಗರ ಠಾಣೆಯಲ್ಲಿ ದಾಖಲಾಗಿದೆ.

ದುರ್ಗಾ ಇಂಟರ್ ನ್ಯಾಶನಲ್ ಹೋಟೇಲ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಪುತ್ತೂರು ರಾಮಕುಂಜ ಗ್ರಾಮದ ಗುತ್ತಿನ ಮನೆಯ ಬಾಲಕೃಷ್ಣ ಆಳ್ವ (52)ರಿಗೆ ಕೊಲೆ ಬೆದರಿಕೆಯೊಡ್ಡಲಾಗಿದೆ. ದುರ್ಗಾ ಇಂಟರ್ ನ್ಯಾಶನಲ್ ಹೋಟೇಲ್ ನ ಮಾಲಕರು, ಉದ್ಯಮಿಯೂ ಆಗಿದ್ದ ಭಾಸ್ಕರ್ ಶೆಟ್ಟಿಯನ್ನು ಆಸ್ತಿ ವಿಚಾರವಾಗಿ ಜು. 28 ರಂದು ಪತ್ನಿ ರಾಜೇಶ್ವರಿ ಶೆಟ್ಟಿ, ಪುತ್ರ ನವನೀತ್ ಶೆಟ್ಟಿ, ಗೆಳೆಯ ನಿರಂಜನ ಭಟ್ ಸೇರಿ ಕೊಲೆ ಮಾಡಿದ್ದರು.

ಕೊಲೆಯ ಆರೋಪ ಎದುರಿಸುತ್ತಿರುವ ರಾಜೇಶ್ವರಿ ಶೆಟ್ಟಿಯ ಸಹೋದರಿಯರಾದ ರೇಣುಕಾ ರೈ ಹಾಗು ರೂಪಾ ಡಿ.ಕೊಲೆ ಬೆದರಿಕೆಯೊಡ್ಡಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಭಾಸ್ಕರ ಶೆಟ್ಟಿ ಕೊಲೆಯಾದ ನಂತರ ಅವರ ತಾಯಿ ಗುಲಾಬಿ ಶೆಟ್ಟಿಯವರು ಹೋಟೇಲ್ ನ್ನು ನಡೆಸಲು ಸಂದೇಶ್ ಶೆಟ್ಟಿ ಎಂಬವರಿಗೆ ನೀಡಿದ್ದರು. ಅಕ್ಟೋಬರ್ 8ನೇ ತಾರೀಕಿನಂದು ಹೊಟೇಲಿಗೆ ಅಕ್ರಮವಾಗಿ ಪ್ರವೇಶಿಸಿದ ರಾಜೇಶ್ವರಿಯ ಸಹೋದರಿಯರು ಬಾಲಕೃಷ್ಣ ಆಳ್ವ ಹಾಗೂ ಸಂದೇಶ ಶೆಟ್ಟರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Comments are closed.