ಉಡುಪಿ: ಯುವತಿಗೆ ವಂಚಿಸಿದ ಬಗ್ಗೆ ಯುವಕನ ವಿರುದ್ಧ ಉಡುಪಿ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ. ನೊಂದ ಯುವತಿಯ ತಾಯಿಯಿಂದ ಮಹಿಳಾ ಠಾಣೆಗೆ ದೂರು ಸಲ್ಲಿಕೆಯಾಗಿದ್ದು ಅಶ್ಲೀಲ ವರ್ತನೆ, ಹಣ ವಂಚನೆ ಬಗ್ಗೆ ಆರೋಪ ಮಾಡಲಾಗಿದೆ.
ಮಂದರ್ತಿ ಸಮೀಪದ ಹೆಗ್ಗುಂಜೆ ಮೂಲದ ಯುವತಿಯೋರ್ವಳಿಗೆ ಮೊಬೈಲ್ ಮೂಲಕ ಉಡುಪಿ ಕಡೆಕಾರಿನ ರಜತ್ ಎಂಬಾತನ ಲಿಂಕ್ ಆಗಿದ್ದು ಆಕೆಗೆ ಆತ ಏರ್ಫೋರ್ಸ್ ತರಬೇತಿಯ ಸೀಟ್ ಕೊಡಿಸುವ ಆಮಿಷವೊಡ್ಡಿ 1 ಲಕ್ಷ 20 ಸಾವಿರ ಹಣ ಪಡೆದಿದ್ದ ಎನ್ನಲಾಗಿದೆ. ಅಲ್ಲದೇ ಕಳೆದ ಆಗಸ್ಟ್ ತಿಂಗಳಿನಲ್ಲಿ ಈಕೆಗೆ ಪರಿಚಯವಾದ ರಜತ್ ಒಂದಷ್ಟು ತಿಂಗಳ ಹಿಂದೆ ಆಕೆಯನ್ನು ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ತನ್ನ ನಿವಾಸಕ್ಕೆ ಕರೆದೊಯ್ದಿದ್ದಲ್ಲದೇ ಆಕೆ ಬಳಿ ಅಶ್ಲೀಲವಾಗಿ ವರ್ತಸಿದ್ದನೆನ್ನಲಾಗಿದೆ. ಅಲ್ಲದೇ 2016 ನೇ ಆಗಸ್ಟ್ ತಿಂಗಳವರೆಗೂ ಉಡುಪಿ ತಾಲೂಕು ಹೆಗ್ಗುಂಜೆ ಗ್ರಾಮದ ತನ್ನ ನಿವಾಸದಲ್ಲಿರುವ ಯುವತಿಗೆ ನಿತ್ಯ ರಜತ್ ಫೋನ್ ಮಾಡಿ ಬೆಂಗಳೂರಿಗೆ ಪುನ: ಬರುವಂತೆ ಒತ್ತಾಯಿಸುತ್ತಿದ್ದ ಬಗ್ಗೆ ಆರೋಪಿಸಲಾಗಿದೆ. ನಿರಂತರ ಈತನ ಪೀಡನೆಯಿಂದ ಬೇಸತ್ತ ಯುವತಿ ತಾಯಿಗೆ ವಿಚಾರ ತಿಳಿಸಿದ್ದು ಆಕೆ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಆರೋಪಿ ರಜತ್ ತಲೆಮರೆಸಿಕೊಂಡಿದ್ದಾನೆ.
Comments are closed.