ಕರಾವಳಿ

ಇತರರ ಸಾವಿನ ದಿನವನ್ನು ನಿಖರವಾಗಿ ತಿಳಿಸುತ್ತಿದ್ದ ಸ್ವಾಮೀಜಿ ವಿಧಿವಶ

Pinterest LinkedIn Tumblr

jivana_vijayananda_guru

ಮಂಗಳೂರು: ಮನುಷ್ಯನ ಅಂತ್ಯಕಾಲವನ್ನು ಕರಾರುವಾಕ್ಕಾಗಿ ಹೇಳುವ ಮೂಲಕ ಅಚ್ಚರಿಗೆ ಕಾರಣವಾಗಿದ್ದ ಉಳ್ಳಾಲ, ಸೋಮೇಶ್ವರದ ನಿವಾಸಿ ಜೀವನ ವಿಜಯಾನಂದ ಗುರೂಜಿ(54) ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಗಿ ತಿಳಿದುಬಂದಿದೆ.

ಜೀವನ ವಿಜಯಾನಂದ ಗುರೂಜಿ ಅವರ ಬಗ್ಗೆ ಖಾಸಗಿ ಸುದ್ದಿವಾಹಿನಿ ವರದಿ ಪ್ರಕಟಿಸಿತ್ತು. ಆ ಬಳಿಕ ಅವರಲ್ಲಿಗೆ ಪ್ರತಿನಿತ್ಯ ನೂರಾರು ಮಂದಿ ಬರುತ್ತಿದ್ದರು. ತಮ್ಮಲ್ಲಿಗೆ ಬರುತ್ತಿದ್ದ ಅನೇಕ ಮಂದಿಗೆ ಅವರು ‘ನೀನು ಇಂಥ ದಿನ ಸಾಯುತ್ತೀಯಾ’ ಎಂದು ಹೇಳಿದ್ದರೆ ಅವರು ಅದೇ ದಿನ ಸಾವನ್ನಪ್ಪುವ ಮೂಲಕ ಊರಿನಲ್ಲಿ ಅವರ ಬಗ್ಗೆ ಭಯ-ಭಕ್ತಿ ಮೂಡಿತ್ತು. ಅವರ ಭಕ್ತವರ್ಗದ ಸಂಖ್ಯೆಯೂ ಹೆಚ್ಚಿತ್ತು ಎನ್ನಲಾಗಿದೆ.

Comments are closed.