ಮಂಗಳೂರು, ಅ.3 : ಅಬಕಾರಿ ರಕ್ಷಕರ ಹಾಗೂ ಮುಖ್ಯ ರಕ್ಷಕರ ಸಂಘದ ಅಧ್ಯಕ್ಷ ಜಯಪ್ಪ ಲಮಾಣಿ ನೇತೃತ್ವದಲ್ಲಿ ಅಬಕಾರಿ ರಕ್ಷಕರ ಹಾಗೂ ಮುಖ್ಯ ರಕ್ಷಕರ ಸಂಘ ಮಂಗಳೂರು ಇದರ ವಾರ್ಷಿಕ ಮಹಾಸಭೆಯು ಸಂಘದ ಸಭಾಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು ಗೌರವಾಧ್ಯಕ್ಷರಾಗಿ ಸುಧೀರ್, ಅಧ್ಯಕ್ಷರಾಗಿ ಜಯಪ್ಪ ಲಮಾಣಿ, ಉಪಾಧ್ಯಕ್ಷರಾಗಿ ಪ್ರೇಮಾನಂದ ಬಿ., ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುರ್ರಝಾಕ್, ಜೊತೆ ಕಾರ್ಯದರ್ಶಿಗಳಾಗಿ ಭೋಜ ಕೆ., ಕಲಾವತಿ, ಖಜಾಂಚಿಯಾಗಿ ಉಮೇಶ್ ಎಚ್., ಕ್ರೀಡಾ ಕಾರ್ಯದರ್ಶಿಯಾಗಿ ಕೃಷ್ಣಾಚಾರಿ, ರಾಜ್ಯ ಪ್ರತಿನಿಧಿಯಾಗಿ ಸಯ್ಯದ್ ಶಬೀರ್ ಅವರನ್ನು ಆಯ್ಕೆ ಮಾಡಲಾಯಿತು.
ಅಲ್ಲದೆ ಇದೇ ಸಂದರ್ಭದಲ್ಲಿ 15 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಇತ್ತೀಚೆಗೆ ನಿವೃತ್ತಿ ಹೊಂದಿದ ಅಬಕಾರಿ ರಕ್ಷಕ ಪದ್ಮನಾಭ ಸಿ.ಅವರನ್ನು ಸನ್ಮಾನಿಸಲಾಯಿತು.
Comments are closed.