ಕರಾವಳಿ

ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ; ಸಾಕ್ಷ್ಯ ನಾಶದ ಆರೋಪಿಗಳಿಗೆ ಜಾಮೀನು

Pinterest LinkedIn Tumblr

ಉಡುಪಿ: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಸಾಕ್ಷ್ಯ ನಾಶದ ಆರೋಪಿಗಳದ ಶ್ರೀನಿವಾಸ್ ಭಟ್ ಹಾಗೂ ರಾಘವೇಂದ್ರ ಅವರಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

Businessman_Bhaska-Shetty_Missing

ಭಾಸ್ಕರ್ ಶೆಟ್ಟಿ ಕೊಲೆಯಲ್ಲಿ ಸಹಕರಿಸಿದ ಆರೋಪಡಿ ಪ್ರಕರಣದ ಪ್ರಮುಖ ಆರೋಪಿ ನಿರಂಜನ್ ಭಟ್ ತಂದೆ ಶ್ರೀನಿವಾಸ್ ಭಟ್ ಹಾಗೂ ಕಾರು ಚಾಲಕ ರಾಘವೇಂದ್ರನನ್ನು ಮಣಿಪಾಲದ ಪೊಲೀಸರು ಆಗಸ್ಟ್.11ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಪ್ರಕರಣ ಸಿ‌ಐಡಿಗೆ ಹಸ್ತಾಂತರಿಸಿದ ಬಳಿಕ ಸಿ‌ಐಡಿ ಕಸ್ಟಡಿಯನ್ನು ಪಡೆದು ವಿಚಾರಣೆ ನಡೆಸಿತ್ತು. ಆರೋಪಿ ಪರ ವಕೀಲ ವಿಕ್ರಂ ಹೆಗ್ಡೆ ಜಾಮೀನು ನೀಡುವಂತೆ ಅರ್ಜಿಯನ್ನು ಸಲ್ಲಿಸಿದ್ದು ಇದರ ವಿಚಾರಣೆ ನಡೆಸಿದ ನ್ಯಾಯಾಧೀಶರು ಇಬ್ಬರಿಗೂ ಶರ್ತ ಬದ್ದ ಜಾಮೀನು ಮಂಜೂರು ಮಾಡಿತು.

Comments are closed.