ಕರಾವಳಿ

ಹೆಡ್‌ಫೋನ್ ಹಾಕಿ ರೈಲು ಹಳಿ ಮೇಲೆ ಹೋಗುತ್ತಿದ್ದ ಯುವಕ ರೈಲು ಡಿಕ್ಕಿಯಾಗಿ ಸಾವು

Pinterest LinkedIn Tumblr

ಕುಂದಾಪುರ: ಬೆಳಿಗ್ಗೆಯಷ್ಟೇ ಊರಿಗೆ ಬಂದ ಯುವಕನೋರ್ವ ಕಿವಿಗೆ ಮೊಬೈಲ್ ಹೆಡ್‌ಫೋನ್ ಅಳವಡಿಸಿ ರೈಲ್ವೆ ಟ್ರ್ಯಾಕ್ ಮೇಲೆ ನಡೆದು ಹೋಗುತ್ತಿದ್ದ ಸಂದರ್ಭ ಆತನಿಗೆ ರೈಲು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಶನಿವಾರ ಸಂಜೆ ಕುಂದಾಪುರದ ಕುಂದಬಾರಂದಾಡಿ ಸಮೀಪ ನಡೆದಿದೆ.

kundapura_rail-accident_av_oct1-1 kundapura_rail-accident_av_oct1-3 kundapura_rail-accident_av_oct1-4

ಕುಂದಾಪುರದ ಕುಂದಬರಂದಾಡಿಯ ನಿವ್ರತ್ತ ನ್ಯಾಯಾಧೀಶ ದಿವಂಗತ ಜಗನ್ನಾಥ ಹೆಗ್ಡೆ ಅವರ ಮೊಮ್ಮಗ ಜಗತ್ ಹೆಗ್ಡೆ(22) ರೈಲು ಡಿಕ್ಕಿಯಾಗಿ ಮೃತಪಟ್ಟ ದುರ್ದೈವಿ. ಜಗತ್ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದ್ದು ಇಂದಷ್ಟೇ ಜಗತ್ ಬೆಂಗಳೂರಿನಿಂದ ಕುಂದಬಾರಂದಾಡಿಗೆ ಬಂದಿದ್ದರು ಎನ್ನಲಾಗಿದೆ. ಇಂದು ಸಂಜೆ ಹೊತ್ತಿನಲ್ಲಿ ಮನೆ ಸಮೀಪದ ರೈಲ್ವೆ ಟ್ರ್ಯಾಕ್ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಕಿವಿಯಲ್ಲಿ ಹೆಡ್ ಫೋನ್ ಇದ್ದ ಕಾರಣ ರೈಲಿನ ಶಬ್ದ ಕೇಳಿಸಿಲ್ಲ ಎನ್ನಲಾಗಿದೆ.

ಗಂಗೊಳ್ಳಿ ಠಾಣಾಧಿಕಾರಿ ಸುಬ್ಬಣ್ಣ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಕುಂದಾಪುರ ಶವಾಗಾರಕ್ಕೆ ರವಾನಿಸಲಾಗಿದ್ದು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.