ಕರಾವಳಿ

ಕದ್ರಿ ಕ್ರಿಕೆಟರ್‍ಸ್ ಕ್ಲಬ್ ವತಿಯಿಂದ ಕೃಷ್ಣಾಷ್ಟಮಿಯ ಪ್ರಯುಕ್ತ 750 ಫಲಾನುಬವಿಗಳಿಗೆ ಅಕ್ಕಿ ವಿತರಣೆ

Pinterest LinkedIn Tumblr

Kadri_Cricketers_1

ಮಂಗಳೂರು : ಕದ್ರಿ ಕ್ರಿಕೆಟರ್‍ಸ್ ಕ್ಲಬ್ (ರಿ)., ಕದ್ರಿ ಮಂಗಳೂರು ಇವರ ವತಿಯಿಂದ ಕೃಷ್ಣಾಷ್ಟಮಿಯ ಪ್ರಯುಕ್ತ ವರ್ಷಂಪ್ರತಿಯಂತೆ ನಡೆಯುವ ಅಕ್ಕಿ ವಿತರಣಾ ಕಾರ್ಯಕ್ರಮ ಮಂಗಳವಾರ ನಗರದ ಕದ್ರಿ ಮೈದಾನದಲ್ಲಿ ನಡೆಯಿತು.

ಮೂಡಾದ ಮಾಜಿ ಅಧ್ಯಕ್ಷ ಸುರೇಶ್ ಬಲ್ಲಾಳ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸುಮಾರು 750 ಫಲಾನುಬವಿಗಳಿಗೆ ತಲಾ ೫ ಕೆ.ಜಿ. ಅಕ್ಕಿಯನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಗಣೇಶ್ ಶಿರ್ವ, ದುಬೈ,, ಎಸ್.ಇ.ಝಡ್. (ಪಿ.ಆರ್.ಒ.) ರಾಮಚಂದ್ರ ಭಂಡಾರ್‌ಕರ್, ಕಿರಣ್ ಜೋಗಿ (ಕೃಷ್ಣಾಷ್ಟಮಿ ಸಮಿತಿ ಯ ಅಧ್ಯಕ್ಷ), ಇನ್ ಲ್ಯಾಂಡ್ ಬಿಲ್ಡರ್‍ಸ್ ನ ಆಡಳಿತಾ ನಿರ್ದೇಶಕ ಸಿರಾಜ್ ಅಹಮದ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಸ್ಥಳಿಯ ಕಾರ್ಪೊರೇಟರ್ ಅಶೋಕ್ ಡಿ.ಕೆ., ಪ್ರಮುಖರಾದ ದಿನೇಶ್ ದೇವಾಡಿಗ, ಅಮೃತ್ ಕದ್ರಿ,ಲಯನ್ ಕಿಶೋರ್ ಡಿ.ಶೆಟ್ಟಿ, ಮೋಹನ್ ಕೊಪ್ಪಳ, ಕದ್ರಿ ಠಾಣಾ ಎಸ್.ಐ.ಎಮ್. ಜಿ. ನಾಯಕ್ ಮುಂತಾದವರು ಉಪಸ್ಥಿತರಿದ್ದರು.

Comments are closed.