ಕರಾವಳಿ

‘ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ’: ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ

Pinterest LinkedIn Tumblr

ಉಡುಪಿ: ಸಚಿವ ಸಂಪುಟ ಈ ಬಾರಿ ನಡೆಯುತ್ತೇ ಎಂಬ ಸೂಚನೆಗಳು ಸಿಕ್ಕಿದೆ. ಇದಕ್ಕೆ ಪೂರಕ ಎಂಬಂತೆ ಸಚಿವ ಸ್ಥಾನಕ್ಕೆ ಶಾಸಕರು ಹೈಕಮಾಂಡ್ ಕದ ತಟ್ಟುತ್ತಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಬೈಂದೂರು ಶಾಸಕ ಗೋಪಾಲ ಪೂಜಾರಿ ನಾನು ಸಚಿವ ಸ್ಥಾನದ ಆಕಾಂಕ್ಷಿ, ತನಗೆ ಸಚಿವ ಸ್ಥಾನ ನೀಡಬೇಕು ಎಂದು ಹೇಳಿದ್ದಾರೆ.

23mn_UDGVPHI-W1_24_2748977e

ಸಚಿವ ಸಂಪುಟ ಈ ಬಾರಿ ನಡೆಯುವ ಸೂಚನೆಗಳು ಸಿಗುತ್ತಿದೆ. ಜೂನ್ ೧೫ರಂದು ಸಿ‌ಎಂ ಪರಿಷತ್ ಸಭೆಯನ್ನು ಕರೆದಿದ್ದು ಇದರಲ್ಲಿ ಈ ಸಚಿವ ಸಂಪುಟದ ಬಗ್ಗೆ ಚರ್ಚೆ ನಡೆಯಲಿದೆ. ಇದಕ್ಕೆ ಪೂರಕ ಎಂಬಂತೆ ಶಾಸಕರು ಹೈಕಮಾಂಡ್ ಗೆ ಮನವಿ ಮಾಡಿ ತಮಗೆ ಸಚಿವ ಸ್ಥಾನ ನೀಡುವಂತೆ ಕೇಳಿಕೊಂಡಿದ್ದಾರೆ. ಬೈಂದೂರಿನ ಶಾಸಕ ಗೋಪಾಲ ಪೂಜಾರಿ ಕೂಡಾ ನನಗೆ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿರುವ ಬಗ್ಗೆ ಸ್ವತ: ಗೋಪಾಲ ಪೂಜಾರಿಯೇ ಉಡುಪಿಯಲ್ಲಿ ಹೇಳಿಕೆ ನೀಡಿದ್ದಾರೆ.

ಕಳೆದ ನಾಲ್ಕು ಬಾರಿ ಶಾಸಕನಾಗಿ, ಉಡುಪಿ ಕಾಂಗ್ರೆಸ್ ನ ಜಿಲ್ಲಾದ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದು ಈ ಹಿನ್ನಲೆಯಲ್ಲಿ ನನಗೆ ಸಚಿವ ಸ್ಥಾನ ನೀಡಬೇಕು ಎಂದು ಹೈಕಮಾಂಡ್ ನಲ್ಲಿ ಮನವಿ ಮಾಡಿದ್ದು ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ ಎಂದಿದ್ದಾರೆ.

ಬೈಂದೂರು ಅಭಿವ್ರದ್ಧಿಯಲ್ಲಿ ತನ್ನದೇ ಕೊಡುಗೆ ನೀಡಿದ ಜನರ ಪರವಾಗಿ ಕೆಲಸ ಮಾಡುವ ಶಾಸಕ ಎಂದೇ ಖ್ಯಾತರಾದ ಗೋಪಾಲ ಪೂಜಾರಿ ಮಿನಿಸ್ಟರ್ ಆಗುವರೇ ಎಂಬುದು ಮಾತ್ರ ಇನ್ನೂ ನಿಗೂಢ….

Comments are closed.