ಕರಾವಳಿ

ಎರಡು ಪ್ರತ್ಯೇಕ ಅಪಘಾತ ಪ್ರಕರಣ : ಇಬ್ಬರು ಬೈಕ್ ಸಾವರರು ಬಲಿ

Pinterest LinkedIn Tumblr

ಮಂಗಳೂರು, ಜೂ. 13: ನಗರದ ವಾಮಂಜೂರು ಹಾಗೂ ಮಂಗಳಾದೇವಿಯ ಬೋಳಾರದಲ್ಲಿ ನಡೆದ ಎರಡು ಪ್ರತ್ಯೆಕ ಬೈಕ್ ಅಪಘಾತದಲ್ಲಿ ಬೈಕ್ ಸವಾರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ಸಂಭವಿಸಿದೆ.

ಮಂಗಳಾದೇವಿಯ ಬೋಳಾರದ ಬಳಿ ಬೈಕ್‌ಗೆ ಆಟೋರಿಕ್ಷಾವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟರೆ, ವಾಮಂಜೂರಿನ ಮೂಡುಶೆಡ್ಡೆ ಬಳಿ ಬಸ್ಸೊಂದು ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಸಾವನ್ನಪಿದ್ದಾನೆ.

ಈ ಎರಡು ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳನ್ನು ಪ್ರದೀಪ(26) ಹಾಗೂ ಸರಿಪಳ್ಳ ನಿವಾಸಿ ಅಜೀತ್ (19) ಎಂದು ಗುರುತಿಸಲಾಗಿದೆ.

ಅಜಿತ್ ಮೂಡುಶೆಡ್ಡೆಯಿಂದ ವಾಮಂಜೂರು ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಅಜಿತ್ ಬೈಕ್ ಪಿಲುಕುಳದ ಕಡೆಗೆ ಹೋಗುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಅಜಿತ್ ಗಂಭೀರ ಗಾಯಗೊಂಡಿದ್ದು, ತಕ್ಷಣ ಅಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಅಜಿತ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಮಂಗಳಾದೇವಿಯ ಬೋಳಾರ ಸಮೀಪ ನಡೆದ ಅಪಘಾತದಲ್ಲಿ ಪ್ರದೀಪ್ ಎಂಬವರು ಮೃತಪಟ್ಟಿದ್ದಾರೆ. ಪ್ರದೀಪ್ ಸಂಚಾರಿಸುತ್ತಿದ್ದ ಬೈಕಿಗೆ ರಿಕ್ಷಾವೊಂದು ಡಿಕ್ಕಿ ಹೊಡೆದ ಪರಿಣಾಮ ಉಂಟಾದ ಅಪಘಾತದಲ್ಲಿ ತೀವ್ರ ಗಾಯಗೊಂಡ ಪ್ರದೀಪ್ ಸಾವನ್ನಪ್ಪಿದ್ದಾರೆ.

ವಾಮಂಜೂರು ಬಳಿ ನಡೆದ ಅಪಘಾತ ಪ್ರಕರಣ ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಾಗೂ ಬೋಳಾರದಲ್ಲಿ ನಡೆದ ಅಪಘಾತದ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.