ಉಡುಪಿ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿ ಸುಮಾರು ಆರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜಾರಾಗದ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಉಡುಪಿಯ ಹೆರ್ಗ ನಿವಾಸಿ ಜಗದೀಶ್ ನಾಯ್ಕ (29) ಬಂಧಿತ ಆರೋಪಿ.
ಮಣಿಪಾಲ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣದ ಆರೋಪಿಯಾಗಿದ್ದ ಜಗದೀಶ್ ನಾಯ್ಕ 2010 ರಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈ ಬಗ್ಗೆ ನ್ಯಾಯಾಲಯವು ಅನೇಕ ಬಾರಿ ವಾರಂಟು ಹೊರಡಿಸಿದ್ದು ಅದಕ್ಕೂ ಹಾಜರಾಗದೇ ಹಾಗೂ ಅಟ್ಯಾಚ್ ಮೆಂಟ್ ವಾರಂಟ್, ಹಾಗೂ ಪ್ರೊಕ್ಲೊಮೆಷನ್ ಜ್ಯಾರಿ ಆದಾಗಲು ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಎನ್ನಲಾಗಿದೆ.
ಆರೋಪಿಯ ಪತ್ತೆಗೆ ಇಳಿದ ಮಣಿಪಾಲ ಠಾಣಾ ಎಎಸ್ಐ, ಹರೀಶ್ ಹಾಗೂ ಕಾನ್ಸ್ಟೇಬಲ್ ಅಶೋಕರವರು ಉಡುಪಿಯ ಸಣ್ಣಕ್ಕಿಬೆಟ್ಟು ಎಂಬಲ್ಲಿ ಆತನನ್ನು ವಶಕ್ಕೆ ಪಡೆದಿದ್ದಾರೆ.
ಬುಧವಾರ ಆರೋಪಿ ಜಗದೀಶ ನಾಯ್ಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
Comments are closed.