ಕರಾವಳಿ

ಕುಂದಾಪುರ(ಗಂಗೊಳ್ಳಿ): ನದಿಗೆ ಬಿದ್ದು ಮೀನುಗಾರ ಸಾವು

Pinterest LinkedIn Tumblr

ಕುಂದಾಪುರ: ಹೊಳೆಗೆ ಮೀನುಗಾರಿಕೆಗೆ ತೆರಳಿದ್ದ ವೇಳೆ ನೀರಿನಲ್ಲಿ ಬಿದ್ದು ವ್ಯಕ್ತಿಯೋರ್ವರು ಸಾವನ್ನಪಿದ ಘಟನೆ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆಯ ಸಮೀಪದಲ್ಲಿನ ಪಂಚಗಂಗಾವಳಿ ಹೊಳೆಯಲ್ಲಿ ನಡೆದಿದೆ.

ಭಟ್ಕಳ ಮೂಲದ ರಾಜೇಶ್ ಖಾರ್ವಿ(34) ಎನ್ನುವರೇ ಮ್ರತವ್ಯಕ್ತಿ.

Gangolli_Fisherman_Death (2) Gangolli_Fisherman_Death (3) Gangolli_Fisherman_Death (1)

ಮಂಗಳವಾರ ಮೀನುಗಾರಿಕೆಗೆ ತೆರಳಿದ ಸಂದರ್ಭ ನದಿಯ ತಳದಲ್ಲಿ ದೋಣಿಯ ತಳದಲ್ಲಿ ಸಿಕ್ಕಿದ್ದ ಬಲೆ ಬಿಡಿಸಲೆಂದು ಬಗ್ಗಿದಾಗ ಆಯತಪ್ಪಿ ನದಿಗೆ ಬಿದ್ದಿದ್ದಾರೆ.ಅವರನ್ನು ರಕ್ಷಿಸಲು ಮೀನುಗಾರರು ಮುಂದಾದರೂ ಕೂಡ ನೀರಿನ ಸೆಳೆತ ಜಾಸ್ಥಿಯಿಯಿದ್ದ ಕಾರಣ ರಾಜೇಶ್ ಅವರು ನೀರಿನಲ್ಲಿ ಕೊಚ್ಚಿಹೋಗಿದ್ದಾರೆನ್ನಲಾಗಿದೆ. ಸತತ ಹುಡುಕಾಟದ ಬಳಿಕ ರಾಜೇಶ್ ಶವ ಪತ್ತೆಯಾಗಿದೆ.

ಘಟನಾ ಸ್ಥಳಕ್ಕೆ ಗಂಗೊಳ್ಳಿ ಠಾಣೆ ಉಪನಿರೀಕ್ಷಕ ಸುಬ್ಬಣ್ಣ ಮೊದಲಾದವರು ಭೇಟಿ ನೀಡಿದ್ದು ಪ್ರಕರಣ ದಾಖಲಾಗಿದೆ.

Comments are closed.