ಕರಾವಳಿ

ಅನುಪಮಾ ಶೆಣೈ ಸಚಿವ ಪರಮೇಶ್ವರ್ ನಾಯ್ಕ್ ಅವರಿಂದ ಕಿರುಕುಳ ಅನುಭವಿಸಿದ್ದು, ನಾಯ್ಕ್ ರಾಜಿನಾಮೆ ನೀಡಲಿ: ಅನುಪಮಾ ಸೋದರ

Pinterest LinkedIn Tumblr

ಉಡುಪಿ: ಕೂಡ್ಲಗಿ ಡಿವೈ ಎಸ್ಪಿ ಅನುಪಮಾ ಶೆಣೈ ರಾಜೀನಾಮೆ ನಿರ್ಧಾರ ತಕ್ಷಣದ ನಿರ್ಧಾರ ಅಲ್ಲ. 3 ತಿಂಗಳು ಕಿರುಕುಳ ಅನುಭವಿಸಿಯೇ ರಾಜೀನಾಮೆ ನೀಡಿದ್ದಾರೆ. ಉಸ್ತುವಾರಿ ಸಚಿವ ಪರಮೇಶ್ವರ್ ನಾಯ್ಕ್ ಅವರ ಕಿರುಕುಳವೇ ರಾಜೀನಾಮೆಗೆ ಕಾರಣ ಎಂದು ಅನುಪಮಾ ಶೆಣೈ ಅವರ ಸಹೋದರ ಅಚ್ಯುತ್ ಶೆಣೈ ಹೇಳಿದ್ದಾರೆ.

Udupi_Anupama Shenoy_Brother

ಉಡುಪಿ ತಾಲೂಕಿನ ಉಚ್ಚಿಲದಲ್ಲಿರುವ ನಿವಾಸದಲ್ಲಿ ಮಾತನಾಡಿದ ಅವರು ಅನುಪಮಾ ಶೆಣೈ ಗೆ ಪರಮೇಶ್ವರ್ ನಾಯ್ಕ್ ಕಳೆದ ಮೂರು ನಾಲ್ಕು ತಿಂಗಳಿನಿಂದ ಕಿರುಕುಳ ನೀಡುತ್ತಿದ್ದು ಇದರ ಕಾರಣಕ್ಕಾಗಿಯೇ ರಾಜೀನಾಮೆ ನೀಡಿದ್ದಾರೆ. ಅನುಪಮಾ ಹೋರಾಟಕ್ಕೆ ಕುಟುಂಬ ಬೆಂಬಲ ನೀಡಲಿದ್ದು 2-3 ದಿನದಲ್ಲಿ ಅನುಪಮಾ ಮಾಧ್ಯಮದ ಮುಂದೆ ಬರಲಿದ್ದಾರೆ. ರಾಜ್ಯದ ಜನತೆಯೂ ಪರಮೇಶ್ವರ್ ನಾಯ್ಕ್ ರಂತಹ ಸಚಿವರನ್ನು ಕಿತ್ತೊಗೆಯಲು ಹೋರಾಟ ನಡೆಸಬೇಕು ಎಂದರು.

Comments are closed.