ಉಡುಪಿ: ಕೂಡ್ಲಗಿ ಡಿವೈ ಎಸ್ಪಿ ಅನುಪಮಾ ಶೆಣೈ ರಾಜೀನಾಮೆ ನಿರ್ಧಾರ ತಕ್ಷಣದ ನಿರ್ಧಾರ ಅಲ್ಲ. 3 ತಿಂಗಳು ಕಿರುಕುಳ ಅನುಭವಿಸಿಯೇ ರಾಜೀನಾಮೆ ನೀಡಿದ್ದಾರೆ. ಉಸ್ತುವಾರಿ ಸಚಿವ ಪರಮೇಶ್ವರ್ ನಾಯ್ಕ್ ಅವರ ಕಿರುಕುಳವೇ ರಾಜೀನಾಮೆಗೆ ಕಾರಣ ಎಂದು ಅನುಪಮಾ ಶೆಣೈ ಅವರ ಸಹೋದರ ಅಚ್ಯುತ್ ಶೆಣೈ ಹೇಳಿದ್ದಾರೆ.
ಉಡುಪಿ ತಾಲೂಕಿನ ಉಚ್ಚಿಲದಲ್ಲಿರುವ ನಿವಾಸದಲ್ಲಿ ಮಾತನಾಡಿದ ಅವರು ಅನುಪಮಾ ಶೆಣೈ ಗೆ ಪರಮೇಶ್ವರ್ ನಾಯ್ಕ್ ಕಳೆದ ಮೂರು ನಾಲ್ಕು ತಿಂಗಳಿನಿಂದ ಕಿರುಕುಳ ನೀಡುತ್ತಿದ್ದು ಇದರ ಕಾರಣಕ್ಕಾಗಿಯೇ ರಾಜೀನಾಮೆ ನೀಡಿದ್ದಾರೆ. ಅನುಪಮಾ ಹೋರಾಟಕ್ಕೆ ಕುಟುಂಬ ಬೆಂಬಲ ನೀಡಲಿದ್ದು 2-3 ದಿನದಲ್ಲಿ ಅನುಪಮಾ ಮಾಧ್ಯಮದ ಮುಂದೆ ಬರಲಿದ್ದಾರೆ. ರಾಜ್ಯದ ಜನತೆಯೂ ಪರಮೇಶ್ವರ್ ನಾಯ್ಕ್ ರಂತಹ ಸಚಿವರನ್ನು ಕಿತ್ತೊಗೆಯಲು ಹೋರಾಟ ನಡೆಸಬೇಕು ಎಂದರು.
Comments are closed.