ಮಂಗಳೂರು,ಮೇ.30: ರಾಜ್ಯ ಪ್ರವಾಸೋದ್ಯಮ ಇಲಾಖೆ , ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ, ಮಂತ್ರ ಸರ್ಫ್ ಕ್ಲಬ್ ಹಾಗೂ ಅಲ್ ಕಾರ್ಗೋ ಸಂಸ್ಥೆಗಳ ಸಹಯೋಗದಲ್ಲಿ ಸಸಿಹಿತ್ಲು ಬೀಚ್ನಲ್ಲಿ ಹಮ್ಮಿಕೊಂಡ ಮೂರು ದಿನಗಳ ಇಂಡಿಯನ್ ಒಪನ್ ಸರ್ಫಿಂಗ್ ಸ್ಪರ್ಧೆ ರವಿವಾರ ಸಂಪನ್ನಗೊಂಡಿತ್ತು
ರಾಜ್ಯ ಯುವಜನಸೇವೆ, ಕ್ರೀಡೆ ಹಾಗೂ ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಇಂಡಿಯನ್ ಒಪನ್ ಸರ್ಫಿಂಗ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದರು.
ಸರ್ಫಿಂಗ್ ಸ್ಪರ್ಧೆಯಲ್ಲಿ ಖ್ಯಾತ ಬಾಲಿಪುಡ್ ನಟಿ ಎಲಿಯಾನ ಡಿಕ್ರೂಸ್ ಹಾಗೂ ಯುವ ನಟ ವಿನಯ ರೈ ಮತ್ತು ಕ್ರಿಕೆಟ್ ಆಟಗಾರ ಸಂಜು ಸಾಮ್ಸನ್ ಮುಂತಾದವರು ಭಾಗವಿಹಿಸುವ ಮೂಲಕ ಸ್ಪರ್ಧೆಗೆ ಮೆರೆಗು ನೀಡಿದರು.
Comments are closed.