ಕುಂದಾಪುರ: ಇಲ್ಲಿನ ವಿನಾಯಕ ರಿಕ್ಷಾ ನಿಲ್ದಾಣದಲ್ಲಿ ರಿಕ್ಷಾ ಚಾಲಕರಾಗಿರುವ ಅಂಕದಕಟ್ಟೆ ಬಡಾಕೆರೆಯ ನಿವಾಸಿ ಸತೀಶ್ ಪ್ರಭು ಪ್ರಧಾನಿ ಮೋದಿ ಅಭಿಮಾನಿ.
ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರ ಎರಡು ವರ್ಷ ಪೂರೈಸಿ ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂಭ್ರಮದಲ್ಲಿ ಐದು ಕಿ.ಮೀ. ಪ್ರಯಾಣಕ್ಕೆ ಕೇವಲ ಒಂದು ರೂಪಾಯಿ ತೆಗೆದುಕೊಂಡು ಪ್ರಯಾಣಿಕರಿಗೆ ಸೇವೆ ನೀಡುವ ಮೂಲಕ ಮೋದಿ ಬಗೆಗಿನ ತಮ್ಮ ಅಭಿಮಾನ ಪ್ರದರ್ಶಿಸಿದ್ದಾರೆ. ಈ ಬಾರಿ ಸುಮಾರು ಮೂರು ದಿನಗಳ ಕಾಲ ಒಂದು ರೂಪಾಯಿಗೆ 5 ಕಿ.ಮೀ. ರಿಕ್ಷಾ ಪ್ರಯಾಣದ ಸೇವೆಯ ಕೊಡುಗೆಯನ್ನು ನೀಡುತ್ತಾರೆ.
ಕಳೆದ ವರ್ಷವೂ ಕೂಡ ಈ ಕೊಡುಗೆ ನೀಡಿ ಎಲ್ಲೆಡೆ ಪ್ರಚಾರ ಗಿಟ್ಟಿಸಿದ್ದರು.
Comments are closed.