ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ದುಬಾಯಿ ಯು.ಎ.ಇ. ಆಶ್ರಯದಲ್ಲಿ 2016 ಮೇ 20 ತಾರೀಕು ಶುಕ್ರವಾರ ಸಂಜೆ 4.30 ಗಂಟೆಗೆ ದುಬಾಯಿ ಅಲ್ ಸಫಾದಲ್ಲಿರುವ ಜೆ.ಎಸ್.ಎಸ್. ಪ್ರವೈಟ್ ಸ್ಕೂಲ್ ಸಭಾಂಗಣದಲ್ಲಿ 8ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ವಿದ್ಯುಕ್ತವಾಗಿ ನೆರವೇರಿತು.
ಯು.ಎ.ಇ. ಯಲ್ಲಿರುವ ಕರ್ನಾಟಕ ಪರ ವಿವಿಧ ಸಮುದಾಯ ಸಂಘಟನೆಯ ಸಹಕಾರದೊಂದಿಗೆ ನಡೆದ ಶ್ರೀ ಸತ್ಯನಾರಾಯಣ ಪೂಜೆ ಶ್ರೀ ರಘುರಾಜ್ ಭಟ್ ರವರ ಪೌರೋಹಿತ್ಯದಲ್ಲಿ ನಡೆಯಿತು. ಪೂಜಾಕಾರ್ಯದಲ್ಲಿ ಸರ್ವರ ಪರವಾಗಿ ಶ್ರೀ ಸತೀಶ್ ಉಳ್ಳಾಲ್ ಮತ್ತು ಶ್ರೀಮತಿ ಜಯಂತಿ ಉಳ್ಳಾಳ್ ದಂಪತಿಗಳು ಭಾಗವಹಿಸಿ ಪೂಜೆಯನ್ನು ಸಲ್ಲಿಸಿದರು.
ಬಾಲ ಭಜನಾ ಮಂಡಳಿ ಪುಟ್ಟ ಮಕ್ಕಳ ತಂಡದಿಂದ ಭಜನೆ ಪ್ರಾರಂಭವಾಗಿ ವಿವಿಧ ಸಮುದಾಯಗಳಿಂದ ಪ್ರತಿನಿಧಿಸಿದ್ದ ಭಜನಾ ತಂಡದವರಿಂದ ಗಾಯಕರು ಸುಶ್ರಾವ್ಯ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀ ರಾಘವೇಂದ್ರ ಏರ್ಮಾಲ್ ಹಾರ್ಮೋಣಿಯಂ ಮತ್ತು ತಬಲಾ ಸಾಥ್ ನಲ್ಲಿ ಶ್ರೀ ರಾಜೇಶ್ ಕುತ್ತಾರ್ ಸಹಕರಿಸಿದ್ದು, ಶ್ರೀ ಬಿ. ಎಂ. ದಿನೇಶ್ ಆಚಾರ್ ತಂಡ ಜವಬ್ಧಾರಿಯನ್ನು ವಹಿಸಿದ್ದರು. ಇಸ್ಕಾನ್ ದುಬಾಯಿ – ಹರೇ ರಾಮ ಹರೇ ಕೃಷ್ಣ – ಗೌರಂಗಾದೇಶ್ ಅಧ್ಯಕ್ಷರಾದ ಶ್ರೀ ವಲ್ಲಭ ದಾಸ್ ಪ್ರಭು ಮತ್ತು ತಂಡದವರಿಂದ ಭಜನೆ, ಕೀರ್ತನೆ ನೃತ್ಯ ಸರ್ವ ಭಕ್ತಾಧಿಗಳನ್ನು ಭಕ್ತಿ ಪರವಶಗೊಳ್ಳುವಂತೆ ಮಾಡಿತ್ತು.
ಮಹಾಮಂಗಾಳಾರತಿಯ ನಂತರ ಸುವಾಸಿಯರಿಗೆ ಬಾಗಿನ ಸಮರ್ಪಣೆ ನಡೆಯಿತು. ಭಕ್ತಾಧಿಗಳು ತೀರ್ಥ ಪ್ರಸಾದ, ಸಪಾತ ಭಕ್ಷ್ಯ ಸ್ವೀಕರಿಸಿದ ನಂತರ ಮಹಾಪ್ರಸಾದವನ್ನು ಸ್ವೀಕರಿಸಿದರು.
ಸಭಾಕಾರ್ಯಕ್ರಮದಲ್ಲಿ ಇಸ್ಕಾನ್ ದುಬಾಯಿ – ಹರೇ ರಾಮ ಹರೇ ಕೃಷ್ಣ – ಗೌರಂಗಾದೇಶ್ ತಂಡದ ಮುಖ್ಯಸ್ಥರಾದ ಶ್ರೀ ವಲ್ಲಭ ದಾಸ್ ಪ್ರಭು ಮತ್ತು ವೇದಿಕೆಯಲ್ಲಿ ಸುಂದರ ಅಲಂಕೃತ ಮಂಟಪ ನಿರ್ಮಿಸಿದ ಶ್ರೀಯುತ ಸದಾಶಿವ ಆಚಾರ್ಯ, ಶ್ರೀ ರಾಜೇಶ್ ಕುತ್ತಾರ್, ಪೂಜಾ ಸೇವಾಕಾರ್ಯದಲ್ಲಿ ಸಹಕರಿಸಿದ ಶ್ರೀ ವರಮಾಹಲಕ್ಷ್ಮೀ ಸಮಿತಿಯ ಮುಖ್ಯಸ್ಥೆ ಶ್ರೀಮತಿ ಸುವರ್ಣಾ ಸತೀಶ್, ನಾರಾಯಣ ಸೇವಾ ಸಮಿತಿ ದುಬಾಯಿ ಮುಖ್ಯಸ್ಥರಾದ ಶ್ರೀ ಅನಿಲ್ ಕಾಮತ್ ಇವರುಗಳನ್ನು ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಕಾರ್ಯಕಾರಿ ಸಮಿತಿಯವರು ಶಾಲು ಹೊದಿಸಿ ಸನ್ಮಾನಿಸ್ ಗೌರವಿಸಿದರು. ಶ್ರೀಯುತರುಗಳಾದ ವಾಸು ಶೆಟ್ಟಿ, ಸತೀಶ್ ಪೂಜಾರಿ, ವಿಶ್ವನಾಥ್ ಶೆಟ್ಟಿ, ಬಿ. ಎಂ. ದಿನೇಶ್ ಆಚಾರ್ಯ, ಬಾಲಕೃಷ್ಣ ಸಾಲಿಯನ್, ಅನಂದ್ ಸಾಲಿಯಾನ್, ಜಗ್ಗನಾಥ್ ಬೆಳ್ಳಾರೆ, ಉಪೇಂದ್ರ ರವರು ಸನ್ಮಾನ ಪ್ರಕ್ರಿಯೇಯಲ್ಲಿ ಭಾಗಿಗಳಗಿದ್ದರು.
ಶ್ರೀ ಬಿ. ಕೆ. ಗಣೇಶ್ ರೈಯವರು ಪೂಜಾ ಕಾರ್ಯದ ನಿರೂಪಣೆಯನ್ನು ನಡೆಸಿಕೊಟ್ಟರು.
ಯು.ಎ.ಇ. ಬಂಟ್ಸ್, ಬಿಲ್ಲವಾಸ್ ದುಬಾಯಿ, ವಿಶ್ವಕರ್ಮ ಸೇವಾ ಸಮಿತಿ ಯು.ಎ.ಇ. ಮೊಗವೀರ್ಸ್ ಯು.ಎ.ಇ. ಪದ್ಮಶಾಲಿ ಸಮುದಾಯ ಯು.ಎ.ಇ. ರಜಕ ಸಮಾಜ ದುಬಾಯಿ ಸಂಘಟನೆಗಳ ಪ್ರತಿನಿಧಿಗಳು ಒಟ್ಟು ಸೇರಿ ರಚಿತವಾಗಿರುವ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರ ಪೂರ್ವಭಾವಿ ತಯಾರಿಕೆಯೊಂದಿಗೆ ಪೂಜಾಕಾರ್ಯ ಯಶಸ್ವಿಯಾಗಿ ನಡೆಯಿತು.
Comments are closed.