ದೇವಾಡಿಗ ಯುವ ವೇದಿಕೆ (ರಿ.) ಇವರ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಉಡುಪಿಯ ಶಾರದಾ ಕಲ್ಯಾಣ ಮಂಟಪದಲ್ಲಿ ದೇವಾಡಿಗ ಸಮಾವೇಶ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಸುವರ್ಣಾ ನ್ಯೂಸ್ ಕವರ್ ಸ್ಟೋರಿ ವಿಭಾಗದ ವಿಜಯಲಕ್ಷ್ಮಿ ಶಿಬರೂರು ಇವರಿಗೆ “ದೇವಾಡಿಗ ಯುವ ಸಾಧಕಿ-2016” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯೆ ಗೌರೀ ದೇವಾಡಿಗ, ಬೆಂಗಳೂರು ಉಚ್ಚ ನ್ಯಾಯಾಲಯ ನ್ಯಾಯವಾದಿಗಳಾದ ವನಿತಾ ಯು ಎಮ್, Finalist Sye To Dance Reality Show- ಭಾವನಾ ಆರ್ ದೇವಾಡಿಗ, ಕಾರ್ಕಳ ಮಾಜಿ ಪುರಸಭಾಧ್ಯಕ್ಷರು ಶೋಭಾ ಆರ್ ದೇವಾಡಿಗ, ಯುವ ವೇದಿಕೆ ಅಧ್ಯಕ್ಷ ಕಾರ್ತಿಕ್ ಕುಮಾರ್ಪ್ರಧಾನ ಕಾರ್ಯದರ್ಶಿ ಪ್ರವೀಣ್ ದೇವಾಡಿಗ. ಯುವವೇದಿಕೆ ಕೋಶಾಧಿಕಾರಿ ಪ್ರವೀಣ್ ಕುಮಾರ್ ಇವರುಗಳು ಹಾಗೂ ಸಮಾಜದ ಹಲವಾರು ಗಣ್ಯರು ಸಂಘದ ಸದಸ್ಯರುಗಳು ಉಪಸ್ಥಿತದಿದ್ದರು