ಉಡುಪಿ, ಮಾ.6: ದೇವಾಡಿಗ ಯುವ ವೇದಿಕೆ ಕುಂಜಿಬೆಟ್ಟು ಉಡುಪಿ ಮತ್ತು ಸಮಾಜದ ವಿವಿಧ ಸಂಘಟನೆಗಳ ಸಹಾಯದೊಂದಿಗೆ ‘ವಿಶ್ವ ದೇವಾಡಿಗ ಮಹಿಳಾ ವಿಚಾರ ಸಂಕಿರಣ-ದೇವಾಡಿಗ ಸಮ್ಮೇಳನ’ ಮಾರ್ಚ್ 6ರ ರವಿವಾರದಂದು ನಡೆಯಲಿದೆ.
ಉಡುಪಿ ಕುಂಜಿಬೆಟ್ಟುನ ಶ್ರೀ ಶಾರದಾ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 9ರಿಂದ ಸಂಜೆ 6ರ ವರೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು, ನ್ಯಾಯವಾದಿ ವನಿತಾ ಯು.ಎಂ., ಜಿಪಂ ಸದಸ್ಯೆ ಗೌರಿ ದೇವಾಡಿಗ, ಭಾವನಾ ದೇವಾಡಿಗ, ಶೋಭಾ ಆರ್.ದೇವಾಡಿಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರು ಭಾಗವಹಿಸಲಿದ್ದಾರೆ.