ದುಬೈ, ಜೂ.13: ಇಲ್ಲಿನ ಇಂಡಿಯನ್ ಹೈಸ್ಕೂಲ್ನ ಶೇಖ್ ರಾಶೀದ್ ಸಭಾಂಗಣದ ಭವ್ಯ ರಂಗ ಮಂಟಪದಲ್ಲಿ ಯಕ್ಷಮಿತ್ರರು ದುಬಾಯಿ ಯು. ಎ. ಇ.ಯ ಸ್ಥಳಿಯ ಕಲಾವಿದರು ತಮ್ಮ ಅಭಿನಯ ಚಾತುರ್ಯದಿಂದ ‘ಮಣಿಕಂಠ ಮಹಿಮೆ – ರತಿ ಕಲ್ಯಾಣ’ ಯಕ್ಷಗಾನ ಅದ್ಭುತ ರಮ್ಯಲೋಕವನ್ನು ಸೃಷ್ಟಿಸಿ ಐತಿಹಾಸಿಕ ದಾಖಲೆಯನ್ನಾಗಿಸಿದರು.
ಯುಎಇಯಲ್ಲಿ ಈ ವರೆಗೆ ನಡೆದಿರುವ ಯಕ್ಷಗಾನ ಪ್ರದರ್ಶನದಲ್ಲಿ ಸೇರದಷ್ಟು ಪ್ರೇಕ್ಷಕರು ಸೇರುವ ಮೂಲಕ ಇತಿಹಾಸವನ್ನೇ ಸೃಷ್ಟಿಸಿದ್ದು, ಯಕ್ಷಗಾನ ಪ್ರದರ್ಶನವಂತೂ ಪ್ರತಿಯೊಬ್ಬ ಕಲಾವಿದರ ಪ್ರೌಢಿಯಿಂದ ಬಹಳಷ್ಟು ಉತ್ತಮವಾಗಿ ಮೂಡಿಬರುವ ಮೂಲಕ ಪ್ರೇಕ್ಷಕರಲ್ಲಿ ಯಕ್ಷಗಾನದ ಕುರಿತು ಅಭಿಮತ ಮೂಡುವಂತೆ ಮಾಡಿಸಿತು.
ವಾಸುದೇವ್ ಭಟ್ರವರ ಪೌರೋಹಿತ್ಯದಲ್ಲಿ ರಂಗಪೂಜೆ ನಡೆದು ನಂತರ ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಕ್ರಮ ಉದ್ಘಾಟನೆಯಾಯಿತು. ಉದ್ಘಾಟನಾ ಸಮಾರಂಭದಲ್ಲಿ ದುಬೈ ಅಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಫೋರ್ಚುನ್ ಗ್ರೂಪ್ ಆಫ್ ಹೊಟೇಲ್ಸ್ನ ಪ್ರವೀಣ್ ಶೆಟ್ಟಿ, ಹರೀಶ್ ಬಂಗೇರ, ಪ್ರೇಮ್ನಾಥ್ ಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕೊಲ್ಲಿ ನಾಡಿನ ಯಕ್ಷಗಾನ ಪ್ರಿಯರ ಮನಗೆದ್ದ ಸುಮಧುರ ಕಂಠಸಿರಿಯ ಭಾಗವತರು ಪಟ್ಲ ಸತೀಶ್ ಶೆಟ್ಟಿ
ಶ್ರೀ ಕಟೀಲು ಮೇಳದ ಪ್ರಸಿದ್ದ ಭಾಗವತರಾದ ಮಧುರ ಕಂಠದ ಪಟ್ಲ ಸತೀಶ್ ಶೆಟ್ಟಿಯವರು ಅತಿಥಿಯಾಗಿ ದುಬಾಯಿಗೆ ಆಗಮಿಸಿ ತಮ್ಮ ಕಂಠಸಿರಿಯಿಂದ ಭಾಗವತಿಕೆಯ ಮೂಲಕ ಯಕ್ಷಗಾನ ಪ್ರಿಯರ ಮನಗೆದ್ದು ಸರ್ವರ ಪ್ರಶಂಸೆಗೆ ಪಾತ್ರರಾದರು. ಈ ಮೊದಲು ಕೆಲವು ಬಾರಿ ತಮ್ಮ ಕಠಸಿರಿಯನ್ನು ಆಲಿಸುವ ಅವಕಾಶ ದುಬಾಯಿ ಯಕ್ಷಗಾನ ಪ್ರಿಯರಿಗೆ ನೀಡಿ ಕೊಲ್ಲಿನಾಡಿನಲ್ಲಿ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ.
ದುಬಾಯಿಯಲ್ಲಿ ಪ್ರತಿಧ್ವನಿಸಿದ ಚೆಂಡೆಯ ನಿನಾದ… ಕಲಾವಿದ ಪದ್ಯಾಣ ಚೈತನ್ಯ ಕೃಷ್ಣ -ಸ್ತ್ರೀ ಪಾತ್ರಧಾರಿ ಅಕ್ಷಯ್ ಕುಮಾರ್ಗೆ ಸನ್ಮಾನ
ಪ್ರಖ್ಯಾತ ಚೆಂಡೆ ವಾದಕರಾದ ಪದ್ಯಾಣ ಚೈತನ್ಯ ಕೃಷ್ಣ ಪ್ರಥಮ ಬಾರಿಗೆ ದುಬಾಯಿಗೆ ಕಲಾವಿದರಾಗಿ ಆಗಮಿಸಿ ತಮ್ಮ ಹಸ್ಥಕೌಶಲ್ಯದ ಮೂಲಕ ಕೊಲ್ಲಿ ನಾಡಿನ ದಿಕ್ಕು ದಿಕ್ಕಿಗೆ ತಮ್ಮ ಚೆಂಡೆಯನಾದವನ್ನು ಪ್ರತಿಧ್ವನಿಸಿದ್ದಾರೆ. ಪ್ರತಿಭಾನ್ವಿತ ಕಲಾವಿದರಾದ ಇವರನ್ನು ಹಾಗೂ ಊರಿನಿಂದ ಅತಿಥಿ ಕಲಾವಿದರಾಗಿ ಆಗಮಿಸಿ ಮೋಹಿನಿ, ದ್ರೌಪದಿ ಸ್ತ್ರೀ ಪಾತ್ರದ ಮೂಲಕ ಸರ್ವರ ಮೆಚ್ಚುಗೆಗೆ ಪಾತ್ರರಾದ ಅಕ್ಷಯ್ ಕುಮಾರ್ ಮಾರ್ನಾಡ್ ರವರನ್ನು ಯಕ್ಷಮಿತ್ರರು, ಗಣ್ಯರು ಮತ್ತು ಸಹಸ್ರಾರು ಪ್ರೇಕ್ಷಕರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಿದರು.
ಮುಖ್ಯ ಅತಿಥಿಗಳಾದ ದುಬೈ ಅಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಫೋರ್ಚುನ್ ಗ್ರೂಪ್ ಆಫ್ ಹೊಟೇಲ್ಸ್ನ ಪ್ರವೀಣ್ ಶೆಟ್ಟಿ, ಚಿಲಿವಿಲಿಯ ಸತೀಶ್ ವೆಂಕಟರಮಣ, ದುಬೈ ಬಿಲ್ಲವಾಸ್ನ ಸತೀಶ್ ಪೂಜಾರಿ, ಹರೀಶ್ ಬಂಗೇರ, ಪ್ರೇಮ್ನಾಥ್ ಶೆಟ್ಟಿ, ಸತೀಶ್ ಮಯ್ಯ, ರಘುರಾಮ್ ಶೆಟ್ಟಿ, ವಾಸು ಶೆಟ್ಟಿ, ಗುಣಶೀಲ ಶೆಟ್ಟಿ, ಚಿದಾನಂದ ಪೂಜಾರಿ ಸೇರಿದಂತೆ ಮತ್ತಿತರರು ಸನ್ಮಾನಿಸಿದರು.
ದುಬಾಯಿಯಲ್ಲಿ ಪ್ರತಿಷ್ಠಿತ ಶೇಖ್ ರಾಶೀದ್ ಭವ್ಯ ಸಭಾಂಗಣದಲ್ಲಿ ಒಂದು ಸಾವಿರದ ಐನೂರು ಮಂದಿ ಕುಳಿತು ವೀಕ್ಷಿಸುವ ಭವ್ಯ ಸುಸಜ್ಜಿತ ರಂಗಮಂದಿರದಲ್ಲಿ ಯಕ್ಷಮಿತ್ರರ ಕಲಾ ತಂಡ ತಮ್ಮ ಅಭಿನಯ ಚಾತುರ್ಯವನ್ನು ಬಹುನಿರೀಕ್ಷಿತ ಅಭಿಮಾನಿಗಳ ಮುಂದೆ ಸಾಕ್ಷೀಕರಿದರು.
ಕಲಾಪ್ರೌಡಿಮೆಯನ್ನು ಸಾಕ್ಷೀಕರಿಸಿದ ಯಕ್ಷಮಿತ್ರರ ಕಲಾ ತಂಡ
ದುಬಾಯಿಯಲ್ಲಿ ವಿವಿಧ ಹುದ್ದೆಯಲ್ಲಿ ಅವಿಶ್ರಾಂತ ದುಡಿತದ ನಡುವೆ ತಮಗೆ ಸಿಗುವ ಅಲ್ಪ ಸ್ವಲ್ಪ ಸಮಯವನ್ನು ಕಲಾಸೇವೆಗೆ ಮುಡಿಪಾಗಿಟ್ಟು ಕಳೆದ ಹಲವು ವರ್ಷಗಳಿಂದ ಯು.ಎ.ಇ. ಯಕ್ಷಗಾನ ಅಭಿಮಾನಿಗಳಿಗೆ ವಿವಿಧ ಪ್ರಸಂಗಗಳನ್ನು ಪ್ರದರ್ಶಿಸಿಕೊಂಡು ಬರುತ್ತಿದ್ದಾರೆ. ಯಕ್ಷಮಿತ್ರರ ಕಲಾ ತಂಡ ಹಲವಾರು ತಿಂಗಳಿನಿಂದ ತಾಲಿಮು ನಡೆಸಿ ಪರಿಪಕ್ವತೆಯನ್ನು ಮೈಗೂಡಿಸಿಕೊಂಡಿದ್ದಾರೆ.
ಕೊಲ್ಲಿನಾಡಿನ ಕಲಾವಿದರಿಗೆ ಊರಿನಿಂದ ಅತಿಥಿ ಕಲಾವಿದರಾಗಿ ಆಗಮಿಸಿದ ಗಂಗಾಧರ್ ಶೆಟ್ಟಿಗಾರ್, ಅಕ್ಷಯ್ ಕುಮಾರ್ ಮಾರ್ನಾಡ್ ಮತ್ತು ಲಕ್ಷ್ಮಣ್ ಕುಮಾರ್ ಮರಕಡ ಅನುಭವೀ ಕಲಾವಿದರು ಸಾಥ್ ನೀಡಿ ಯಶಸ್ಸಿನಲ್ಲಿ ಭಾಗಿಗಳಾದರು.
ಬಾಲಕೃಷ್ಣ ಡಿ ಶೆಟ್ಟಿಗಾರ್ ಕಿನ್ನಿಗೋಳಿ, ಕಿಶೋರ್ ಗಟ್ಟಿ, ಸುಧಾಕರ್ ತುಂಬೆ, ಭವಾನಿ ಶಂಕರ್ ಶರ್ಮಾ, ಚಿದಾನಂದಾ ಪೂಜಾರಿ, ಹರೀಶ್ ಎಂ.ಎಸ್. ಯಯ್ಯಡಿ, ದೀಪಕ್ ರಾವ್ ಪೇಜಾವರ್, ಕೃಷ್ನಪ್ರಸಾದ್ ಸುರತ್ಕಲ್, ಪ್ರಭಾಕರ್ ಸುವರ್ಣ, ಕೃಷ್ಣರಾಜ್ ಭಟ್ ಅಬುಧಾಬಿ, ಶರಣ್ಯ ವೆಂಕಟೇಶ್ ಶಾಸ್ತ್ರೀ, ಸ್ವಾತಿ ಶರತ್ ಆಚಾರ್, ಸಮಂತ ಹೆಗ್ಡೆ,ಪ್ರತೀಕ್ ಜಯಾನಂದ್ ಪಕ್ಕಳ, ಮನಸ್ವಿನಿ ಭವಾನಿಶಂಕರ್ ಶರ್ಮಾ, ಅದಿತಿ ದಿನೇಶ್ ಶೆಟ್ಟಿ, ಪ್ರಾಪ್ತಿ ಜಯನಂದ್ ಪಕ್ಕಳ, ಸ್ಮತಿ ಲಕ್ಷ್ಮೀಕಾಂತ್ ಭಟ್, ಅನಿಕೇತ್ ಭವಾನಿಶಂಕರ್ ಶರ್ಮಾ, ವಾಸು ಬಾಯರು, ಸೀತರಾಮ್ ರೈ, ವಸಂತ್ ಶೇರ್ವೆಗಾರ್, ಸಹನಾ ಭಟ್, ಗಿರೀಶ್ ನಾರಾಯಣ್ ಕಾಟಿಪಳ್ಳ, ಆದಿತ್ಯ ದಿನೇಶ್ ಶೆಟ್ಟಿ, ರವಿ ಭಟ್ ವೀನಸ್, ತನ್ವಿ ಭಟ್, ಜಯಂತ್ ಶೆಟ್ಟಿ, ಕೃಷ್ಣ ಕುಮಾರ್ ಐಲ, ಸ್ವಾತಿ ಶರತ್ ಆಚಾರ್, ಸಪ್ನ ಕಿರಣ್, ವಿಕ್ರಮ ಶೆಟ್ಟಿ ಕಡಂದಲೆ, ಪ್ರಸಾದ್ ಅದ್ಯಪಾಡಿ. ಈ ಪ್ರಸಂಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದುಬಾಯಿಯ ಬಾಲ ಕಲಾವಿದರು ಪಾತ್ರವಹಿಸಿ ಯಕ್ಷಕಲಾರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಭಿಮಾನ ಒಲವು ಮೂಡಿಸಿಕೊಂಡಿದ್ದು ಸಮಸ್ಥ ಪ್ರೇಕ್ಷಕ ವರ್ಗ ಮೆಚ್ಚುವಂತಾಗಿದೆ.
ಹಿಮ್ಮೇಳದಲ್ಲಿ ಭಾಗವತಿಕೆ ಸತೀಶ್ ಶೆಟ್ಟಿ ಪಟ್ಲ, ಚೆಂಡೆ ಪದ್ಯಾಣ ಚೈತನ್ಯ ಕೃಷ್ಣ, ಪುತ್ತಿಗೆ ವೆಂಕಟೇಶ್ ಶಾಸ್ತ್ರಿ, ಮಧೂರು ಲಕ್ಷ್ಮೀಶ ಶರ್ಮ, ಕರ್ಣಾಕರ್ ಪೂಜಾರಿ, ಚಕ್ರತಾಳ ಚಂದ್ರಮೋಹನ್ ಶೆಟ್ಟಿಗಾರ್. ಶರತ್ ಆಳ್ವ,
ಪ್ರಸಾದನ, ವೇಷ ಭೂಷಣ ಊರಿನಿಂದ ಆಗಮಿಸಿದ ಶ್ರೀ ಗಂಗಾಧರ್ ಶೆಟ್ಟಿಗಾರ್, ಲಕ್ಷ್ಮಣ ಕುಮಾರ್ ಮರಕಡ
ರಂಗಲಂಕಾರ ದಿನೇಶ್ ಬಿಜೈ, ಭಾಸ್ಕರ ನೀರುಮಾರ್ಗ
ರಂಗಸ್ಥಳ ನಿರ್ಮಾಣ ಉಡ್ ಶೈನ್ ಕಾರ್ಪೆಂಟರಿ ದುಬಾಯಿ, ಧ್ವನಿ ಬೆಳಕು ಬ್ರಾಡ್ವೇ ಅಬುಧಾಬಿ. ಪ್ರಚಾರ ಕಲೆ ಅಶ್ವತ್ ಸಾಮ್ಯುವೆಲ್.
ಕಾರ್ಯಕ್ರಮ ನಿರೂಪಣೆ ಶ್ರೀ ವಿಠಲ್ ಶೆಟ್ಟಿ, ರಾಜೇಶ್ ಕುತ್ತಾರ್
ಸಹಕಾರ ರಾಜೇಶ್ ಶೆಟ್ಟಿ ದೇವಸ್ಯ.
ಕಲಾವಿದರ ರಂಗ ತಾಲೀಮು, ಪೂರ್ವ ತಯಾರಿಗೆ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ಸ್ಥಳ ನೀಡಿ ಬೆಂಬಲ ನೀಡಿದ್ದಾರೆ.
ಸಂಪೂರ್ಣ ಕಾರ್ಯಕ್ರಮದ ಸಂಯೊಜಕರು ಶ್ರೀ ದಿನೇಶ್ ಶೆಟ್ಟಿ ಕೊಟ್ರಂಜ ಮತ್ತು ಶ್ರೀ ಚಿದಾನಂದ ಪೂಜಾರಿ.
ವರದಿ: ಬಿ. ಕೆ. ಗಣೇಶ್ ರೈ(ಅರಬ್ ಸಂಯುಕ್ತ ಸಂಸ್ಥಾನ)
ಫೋಟೋ: ಅಶೋಕ್ ಬೆಳ್ಮಣ್