ಕನ್ನಡ ವಾರ್ತೆಗಳು

ಯುವ ಪ್ರೇಮಿಗಳು ಹಾಡಿಯಲ್ಲಿ ಆತ್ಮಹತ್ಯೆ.. ಈ ಸಾವಿಗ್ಯಾರು ಹೊಣೆ..?

Pinterest LinkedIn Tumblr

ಉಡುಪಿ/ ಕುಂದಾಪುರ: ಪ್ರೀತಿ ಮಾಡಬಾರದು ಮಾಡಿದರೇ ಜಗಕೇ ಹೆದರಬಾರದು ಅಂತಾರೇ… ಅ‌ಅದರೇ ಇಲ್ಲೊಬಬ್ ವಯಸ್ಕ ಪ್ರೇಮಿ ಅಪ್ರಾಪ್ತೆಯನ್ನೇ ತನ್ನ ಪ್ರೀತಿಯ ತೆಕ್ಕೆಗೆ ಬೀಳಿಸಿಕೊಂಡು ಅದೆಲ್ಲೊಂದಿಷ್ಟು ತಿರುಗಾಟ ನಡೆಸಿ ಕೊನೆಗೆ ಪ್ರೇಮ ಎಟುಕಲ್ಲವೆಂದು ತಿಳಿದು ಮರವೊಂದಕ್ಕೆ ನೇಣು ಬಿಗಿದು ಪರಸ್ಪರ ತಬ್ಬಿಕೊಂಡೆ ಆತ್ಮಹತ್ಯೆಗೆ ಶರಣಾದ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಸಾಯಬ್ರಕಟ್ಟೆ ಸಮೀಪದ ಕಾಜ್ರಳ್ಳಿಯ ದ್ವಾಯ್‌ಮನೆ ಹಾಡಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಬನ್ನೇರಳಕಟ್ಟೆ ರಿಕ್ಷಾ ನಿಲ್ದಾಣದ ಚಾಲಕ ದಿವಾಕರ ನಾಯ್ಕ್(22) ಮತ್ತು ಮಂದರ್ತಿ ಹೈಸ್ಕೂಲ್ ವಿದ್ಯಾiಗಿದ್ದ ಚೈತ್ರಾ ಮೊಗವೀರ (16) ಒಂದೇ ಮರಕ್ಕೆ ನೇಣು ಬಿಗಿದು ಜೀವಕಳೆದುಕೊಂಡವರು.

Udupi_Lovers_Hanging Udupi_Lovers_Hanging (10) Udupi_Lovers_Hanging (9) Udupi_Lovers_Hanging (8) Udupi_Lovers_Hanging (7) Udupi_Lovers_Hanging (6) Udupi_Lovers_Hanging (5) Udupi_Lovers_Hanging (4) Udupi_Lovers_Hanging (3) Udupi_Lovers_Hanging (2) Udupi_Lovers_Hanging (1)

 Udupi_Lovers_Hanging (1) Udupi_Lovers_Hanging (2) Udupi_Lovers_Hanging (3) Udupi_Lovers_Hanging (4) Udupi_Lovers_Hanging (5) Udupi_Lovers_Hanging (6) Udupi_Lovers_Hanging (7) Udupi_Lovers_Hanging (8) Udupi_Lovers_Hanging (9) Udupi_Lovers_Hanging (11) Udupi_Lovers_Hanging (12) Udupi_Lovers_Hanging (13) Udupi_Lovers_Hanging (14) Udupi_Lovers_Hanging (15) Udupi_Lovers_Hanging (16) Udupi_Lovers_Hanging (17) Udupi_Lovers_Hanging (18) Udupi_Lovers_Hanging (19) Udupi_Lovers_Hanging (20)

ರಿಕ್ಷಾ ಹಾಗೂ ಬಾಡಿಗೆ ಓಮ್ನಿ ಕಾರನ್ನು ಇಟ್ಟುಕೊಂಡಿದ್ದ ಬಾರಾಳಿ ನಿವಾಸಿ ಈ ದಿವಾಕರ್ ಕೆಲವು ವರ್ಷಗಳಿಂದ ಇಲ್ಲೇ ಸಮೀಪದ ನಿವಾಸಿ ಚೈತ್ರ ಎಂಬಾಕೆಯನ್ನು ಪ್ರೀತಿಸುತಿದ್ದ. ಇವರಿಬ್ಬರು ಪ್ರೇಮದ ನಡುವೆಯೇ ಹಲವೆಡೆ ಸುತ್ತಾಡಿಕೊಂಡಿದ್ದರು. ಮಂದರ್ತಿಯ ಶಾಲೆಯಲ್ಲಿ ಹತ್ತನೇ ತರಗತಿ ಅನುತ್ತೀರ್ಣಳಾದ ಚೈತ್ರಾಳನ್ನು ಆಕೆಯ ಸಂಬಂಧಿಕರ ಮನೆಯಾದ ಅಲ್ಬಾಡಿ ಸಮೀಪದ ಶಾಲೆಗೆ ದಾಖಲಿಸುವ ಪ್ರಯತ್ನ ಮಾಡಲಾಗಿತ್ತಾದರೂ ಆಕೆ ಒತ್ತಾಯದ ಮೇರೆಗೆ ಆಕೆಯನ್ನು ಪುನಃ ಅಮ್ಮನ ಮನೆ ಸೈಬ್ರಾಕಟ್ಟೆಯಲ್ಲಿಯೇ ಓದಿಸುವ ನಿರ್ಧಾರ ಮಾಡಲಾಗಿತ್ತು. ಆದರೇ ಈತನ್ಮಧ್ಯೆ ಚೈತ್ರಾ ಜೂ.೯ ರಿಂದ ನಿಗೂಢವಾಗಿ ಕಾಣೆಯಾಗಿದ್ದು ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ದೂರು ದಾಖಲಾಗಿತ್ತು.

ನೇಣಿಗೆ ಶರಣಾದ ಜೋಡಿ: ದೂರು ದಾಖಲಾದ ಹಿನ್ನೆಲೆ ಪೊಲೀಸರು ಹಾಗೂ ಇಬ್ಬರ ಕುಟುಂಬಿಕರು ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಆದರೇ ಎರಡು ದಿನಗಳಾದರೂ ಈ ಪ್ರಯತ್ನ ವಿಫಲವಾಗಿತ್ತು. ಶುಕ್ರವಾರ ಸಂಜೆ ವೇಳೆಗೆ ದಿವಾಕರನ ಓಮ್ನಿ ಕಾರು ಕಾಜ್ರಳ್ಳಿ ಹಾಡಿ ಸಮೀಪ ಪತ್ತೆಯಾಗಿದ್ದು ಸ್ಥಳದಲ್ಲಿ ಹುಡುಕಾಟ ನಡೆಸಿದಾಗ ಮರವೊಂರಲ್ಲಿ ಇಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಚೈತ್ರಾ ತಂದೆಯನ್ನು ಕಳೆದುಕೊಂಡಿದ್ದು, ತಾಯಿ ವನಜಾ, ಅಜ್ಜ ಶುಕ್ರ ಮೊಗವೀರ, ಅಜ್ಜಿ ಸೀತಾ, ಹಿರಿಯ ಸೋದರಿಯೊಂದಿಗೆ ವಾಸವಿದ್ದಳು. ಇಬ್ಬರ ಪ್ರೇಮದ ನಡುವೆ ದಿವಾಕರ್ ಹಾಗೂ ಚೈತ್ರಾ ಇತ್ತೀಚೆಗೆ ಉಡುಪಿಯ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರ ಕೈಗೆ ಸಿಲುಕಿ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

ಒಟ್ಟಿನಲ್ಲಿ ಅಪ್ರಾಪ್ತೆ ಹುಡುಗಿ ಹಾಗೂ ಪ್ರಾಪ್ತ ಯುವಕನ ಲವ್ ಸ್ಟೋರಿ ಧಾರುಣ ಅಂತ್ಯಕಂಡಿದ್ದು ಸ್ಥಳೀಯ ಜನರನ್ನು ನಿದ್ದೆಗೆಡಿಸಿದೆ.

ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಂ ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.

Write A Comment