ಕರಾವಳಿ

ನೀರು ಕೇಳುವ ನೆಪದಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ

Pinterest LinkedIn Tumblr

KND_MAY.13_6

ಕುಂದಾಪುರ: ಮನೆಯಲ್ಲಿ ಅಪ್ರಾಪ್ತೆ ಯುವತಿಯೊಬ್ಬಳೇ ಇದ್ದ ಸಂದರ್ಭ ನೀರು ಕೇಳುವ ನೆಪದಲ್ಲಿ ಮನೆಗೆ ಬಂದ ಸಮೀಪದ ಯುವಕ ಲೈಂಗಿಕ ಕಿರುಕುಳ ನೀಡಿದ ಘಟನೆ ಕೊಲ್ಲೂರು ಠಾಣಾ ವ್ಯಾಪ್ತಿಯ ಹಿಜಾಣ ಎಂಬಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಚಿತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಜಾಣದ ನಿವಾಸಿ ಸಂತೋಷ ಮೊಗವೀರ(27) ಎಂಬಾತನೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯಾಗಿದ್ದು, ಸಧ್ಯ ತಲೆಮರೆಸಿಕೊಂಡಿದ್ದಾನೆ.

ಘಟನೆಯ ವಿವರ: ಆರೋಪಿ ಸಂತೋಷ ಮೊಗವೀರ ಎಂಬಾತ ಮನೆ ಸಮೀಪದ ಮನೆಯೊಂದರಲ್ಲಿ ಅಪ್ರಾಪ್ತೆ ಯುವತಿಯೊಬ್ಬಳೇ ಇರುವುದನ್ನು ಗಮನಿಸಿ, ಅಲ್ಲಿಗೆ ಹೋಗಿ ನೀರು ಕೇಳಿದ್ದಾನೆ. ಈ ಸಂದರ್ಭ ನೀರು ತರಲು ಒಳ ಹೋದ ಯುವತಿಯನ್ನು ಅನೈತಿಕವಾಗಿ ಪೀಡಿಸಿದ್ದಾನೆ ಎಂದು ಯುವತಿ ಮನೆಯವರಲ್ಲಿ ಹೇಳಿಕೊಂಡಿದ್ದಾಳೆ. ಈ ಸಂದರ್ಭ ಸ್ಥಳೀಯರಿಗೆ ಸುದ್ಧಿ ತಿಳಿದು ಪೊಲೀಸರಿಗೆ ಸುದ್ಧಿ ತಿಳಿದು ಸ್ಥಳಕ್ಕೆ ಆಗಮಿಸಿ ಪೋಸ್ಕೋ ಕಾಯ್ದೆಯಡಿಯಲ್ಲಿ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಸಂತೋಷ್ ಮೊಗವೀರ ತಲೆ ತಪ್ಪಿಕೊಂಡಿದ್ದು, ಆತ ಸ್ಥಳೀಯ ಸಹಕಾರಿ ಸಂಘವೊಂದರ ಅಧಿಕಾರಿ ಎಂದು ತಿಳಿದುಬಂದಿದೆ.

Write A Comment