ಕರಾವಳಿ

ಅಸೋಡು ನಂದಿಕೇಶ್ವರ ದೇವರಿಗೆ ಬೆಳ್ಳಿ ಚಲ್ಲಣ ಗೆಜ್ಜೆ ಸಮರ್ಪಣೆ

Pinterest LinkedIn Tumblr

VKD-1-2-25

ಕುಂದಾಪುರ: ಅಸೋಡು ದಿ. ಪಾತ್ರಿ ನಾರಾಯಣ ಪೂಜಾರಿ ಅವರ ಹರಕೆ ಸೇವೆಯಾಗಿ ಅವರ ಮಗ ಮುಂಬಯಿ ಸಾಯಿ ಎಲೆಕ್ಟ್ರಿಕಲ್ಸ್ ಮಾಲಕ ಕೃಷ್ಣ.ಎನ್.ಪೂಜಾರಿ ಶನಿವಾರ ಸಂಜೆ ಅಸೋಡು ಬೆಂಕಿಕಾನ್ ನಂದಿಕೇಶ್ವರ ದೇವರಿಗೆ ಬೆಳ್ಳಿ ಚಲ್ಲಣ ಗೆಜ್ಜೆ ಸಮರ್ಪಿಸಿದರು. ಅಸೋಡು ನಂದಿಕೇಶ್ವರ ದೇವಸ್ಥಾನದ ಮೊಕ್ತೇಸರ ದಯಾನಂದ ಹೆಗ್ಡೆ ಗೆಜ್ಜೆಯನ್ನು ಸ್ವೀಕರಿಸಿ ಶುಭ ಹಾರೈಸಿದರು.

4 ಕೆ.ಜಿ.600 ಗ್ರಾಮ್ ತೂಕದ ಬೆಳ್ಳಿ ಚಲ್ಲಣ ಗೆಜ್ಜೆಯನ್ನು ಕುಂದಾಪುರ ಕರಕುಶಲ ಶಿಲ್ಪಿ ಉಮೇಶ್ ಆಚಾರ್ಯ ತಯಾರಿಸಿದ್ದರು. ಇದೇ ಸಂದರ್ಭದಲ್ಲಿ ದಾನಿಗಳಾದ ಕ್ರಷ್ಣ.ಎನ್.ಪೂಜಾರಿ ಹಾಗೂ ಶಿಲ್ಪಿ ಉಮೇಶ್ ಆಚಾರ್ಯ ಅವರನ್ನು ದೇವಸ್ಥಾನ ವತಿಯಿಂದ ಸಮ್ಮಾನಿಸಲಾಯಿತು. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಅಸೋಡು ಚಂದ್ರ ಪೂಜಾರಿ, ಉದ್ಯಮಿ ರವಿರಾಜ್ ಶೆಟ್ಟಿ, ತಾ.ಪಂ ಸದಸ್ಯ ದೀಪಕ್ ಕುಮಾರ್ ಶೆಟ್ಟಿ, ನಂಬಿದ ಭಕ್ತಾಭಿಮಾನಿಗಳು ಹಾಗೂ ಕುಟುಂಬಸ್ಥರು ಹಾಜರಿದ್ದರು. ಆದಿತ್ಯವಾರ ಗರಡಿಯ ವಠಾರದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

Write A Comment