ಕರಾವಳಿ

ಹಟ್ಟಿಯಂಗಡಿ : ಸಿದ್ಧಿವಿನಾಯಕ ದೇವರಿಗೆ ಬೆಳ್ಳಿಯ ಮುಖವಾಡ, ಪೂರ್ಣ ದೇಹ ಕವಚ ಸಮರ್ಪಣೆ

Pinterest LinkedIn Tumblr

ಕುಂದಾಪುರ: ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ, ಹಟ್ಟಿಯಂಗಡಿಯ ಶ್ರೀ ದೇವರಿಗೆ ಬೆಳ್ಳಿಯ ಮುಖವಾಡ ಸೇರಿದಂತೆ ಪೂರ್ಣ ದೇಹ ಕವಚವನ್ನು ಹರಿಹರದ ಹೋಟೆಲ್ ಉದ್ಯಮಿ ರಾಜಗೋಪಾಲ ಹೆಬ್ಬಾರ್  ಸಮರ್ಪಿಸಿದರು.

Hattiyangadi_Ganapa_Deepotsava

 

ದೇವಳದ ಆಡಳಿತ ಧರ್ಮದರ್ಶಿ ಹೆಚ್. ರಾಮಚಂದ್ರ ಭಟ್ ಅವರು ಬೆಳ್ಳಿಯ ಮುಖವಾಡ ಅರ್ಪಿಸಿದ ರಾಜಗೋಪಾಲ ಹೆಬ್ಬಾರ್ ಅವರನ್ನು ಗೌರವಿಸಿ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ಶ್ರೀ ದೇವರಿಗೆ ಅಭಿಷೇಕ, ಅಲಂಕಾರ ವಿಶೇಷ ಪೂಜೆ, ರಂಗಪೂಜಾದಿ ಸೇವೆಗಳನ್ನು ನೆರವೇರಿಸಲಾಯಿತು.

ರಾತ್ರಿ ಕ್ಷೇತ್ರದಲ್ಲಿ ಕಾರ್ತಿಕ ದೀಪೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು. ಸಾವಿರಾರು ಭಕ್ತರು ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಿ ದೀಪೋತ್ಸವವನ್ನು ಕಣ್ತುಂಬಿಕೊಂಡರು.

Write A Comment