ಮಂಗಳೂರು,ನ.11: ದ.ಕ ಜಿಲ್ಲಾ ಸಾಹಿತ್ಯ ಪರಿಷತ್ ಮತ್ತು ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕಾರಂತರ ಹುಟ್ಟುಹಬ್ಬವನ್ನು ನಗರದ ಡೌನ್ ಬಾಸ್ಕೊ ಹಾಲ್ ನಲ್ಲಿಅಯೋಜಿಸಲಾಗಿದ್ದು ಈ ಸಂಧರ್ಭದಲ್ಲಿ ಮೆಂಡೋಲಿನ್ ಬಾಲಕಲಾವಿದ, ಶಾರದಾ ವಿದ್ಯಾಲಯದ ವಿದ್ಯಾರ್ಥಿ ಸದ್ಗುಣ ಐತಾಳ, ಭರತನಾಟ್ಯ, ಕಲಾವಿದೆ ಸಹೋದರಿಯರಾದ ಅನನ್ಯ ಎಸ್. ರಾವ್, ಅಪೂರ್ವ ಎಸ್. ರಾವ್, ತೆಂಕು ತಿಟ್ಟಿನ ಯಕ್ಷಗಾನ ಬಾಲಪ್ರತಿಭೆ ರಂಜಿತಾ ಎಲ್ಲೂರು, ಕರಾಟೆ ಪಟು ಕಾರ್ತಿಕ್ ಎಸ್. ಕಟೀಲು ಇವರಿಗೆ ಕಲ್ಕೂರ ಬಾಲ ಪ್ರತಿಭಾ ಪುರಸ್ಕಾರವಿಟ್ಟು ಅವರನ್ನು ಗೌರವಿಸಲಾಯ್ತು. ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರತಿಭಾನ್ವಿತರನ್ನು ಪುರಸ್ಕರಿಸಿದರು.
ಕರಾವಳಿ