– ಫೈಲ್ (ಕಡತ) ಚಿತ್ರ –
ಮಂಗಳೂರು, ನ.7: ಕೊಡಿಕೆರೆಯ ಎಸ್ಇಝಡ್ ಕಾಲನಿಯಲ್ಲಿರುವ ಮುಹಿಯುದ್ದೀನ್ ಜುಮಾ ಮಸೀದಿಯ ಮೇಲೆ ನಿನ್ನೆ ರಾತ್ರಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಮಸೀದಿಯ ಗಾಜಿಗೆ ಹಾನಿಯಾಗಿದೆ.
ಕಳೆದ ಒಂದೂವರೆ ವರ್ಷದಲ್ಲಿ ಇದೇ ಮಸೀದಿಯ ಮೇಲೆ ದಾಳಿ ನಡೆಸಿದ ಎರಡನೆ ಘಟನೆ ಇದಾಗಿದೆ. ಬುಧವಾರ ರಾತ್ರಿ 10:30ರಿಂದ 11ಗಂಟೆಯ ಮಧ್ಯದ ಅವಧಿಯಲ್ಲಿ ಮಸೀದಿಯ ಹಿಂಬದಿಯ ಗಾಜಿಗೆ ಕಲ್ಲಿನಿಂದ ಹೊಡೆದು ಹಾನಿ ಮಾಡಲಾಗಿದೆ ಎಂದು ಮಸೀದಿಯ ಅಧ್ಯಕ್ಷ ಹುಸೈನ್ ದೂರಿನಲ್ಲಿ ತಿಳಿಸಿದ್ದಾರೆ.
2013ರ ಜೂನ್ನಲ್ಲಿ ಮಸೀದಿಯ ಎದುರು ಬಿಯರ್ ಬಾಟಲಿ ಎಸೆದು ಗಾಜಿಗೆ ಹಾನಿ ಮಾಡಲಾಗಿತ್ತು. ಆಗ ಹಾನಿ ಮಾಡಿದ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳದೇ ಇದ್ದುದರಿಂದ ಘಟನೆ ಮರುಕಳಿಸುವಂತಾಗಿದೆ ಎಂದು ಮಸೀದಿಯ ಅಧ್ಯಕ್ಷ ಹುಸೈನ್ ದೂರಿನಲ್ಲಿ ತಿಳಿಸಿದ್ದಾರೆ.