ಕರಾವಳಿ

ಉತ್ತರ ಭಾರತದ ಉದ್ಯಮಿಯಿಂದ ವೆನ್ಲಾಕ್ ಆಸ್ಪತ್ರೆಗೆ ನೀರಿನ ಘಟಕ ದಾನ

Pinterest LinkedIn Tumblr

wenlock_aater_cooler_1

ಮಂಗಳೂರು,ನ.06:  ಗುರುನಾನನಕ್ ಜಯಂತಿ ಅಂಗವಾಗಿ ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ಉತ್ತರ ಭಾರತದ ವರ್ತಕರು ಶುದ್ಧ ಕುಡಿಯುವ ನೀರಿನ ಘಟಕವನ್ನು ಒದಗಿಸಿದ್ದಾರೆ. ಇದನ್ನು ಆಸ್ಪತ್ರೆಯ ಜಿಲ್ಲಾ ವೈದ್ಯಾಧಿಕಾರಿ ಡಾ. ರಾಜೇಶ್ವರಿ ಉದ್ಘಾಟಿಸಿದರು.

wenlock_aater_cooler_3 wenlock_aater_cooler_2

ಈ ಸಂದರ್ಭದಲ್ಲಿ ಮಾತನಾಡಿದ ಅವರು ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ 17 ಜಿಲ್ಲೆಗಳಿಂದ ರೋಗಿಗಳು ಆಗಮಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಾಗಿದೆ. ಇದರಿಂದ ಆಸ್ಪತ್ರೆಗೆ ಬರುವ ಜನರಿಗೆ ಕೂಡ ಅನುಕೂಲವಾಗಲಿದೆ. ಗುರುನಾನಕರ ಸಂದೇಶವನ್ನು ಈ ಮೂಲಕ ಜಾರಿಗೊಳಿಸಲಾಗದೆ. ಇದಕ್ಕಾಗಿ ಉತ್ತರ ಭಾರತದ ವರ್ತಕರಿಗೆ ವಿಶೇಷ ಅಭಿನಂದನೆ ಸಲ್ಲಿಸಿದರು. ಉತ್ತರ ಭಾರತ ವರ್ತಕ ಸಂಘದ ಪ್ರಮುಖರಾದ ಬಲ್ವೀಂದರ್ ಸಿಂಗ್ ಮಾತನಾಡಿ ಕುಡಿಯುವ ನೀರಿನ ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಬಹುದಾಗಿದೆ.

wenlock_aater_cooler_4 wenlock_aater_cooler_5 wenlock_aater_cooler_6 wenlock_aater_cooler_7 wenlock_aater_cooler_8 wenlock_aater_cooler_9

ಇಂದು ದೇಶದಲ್ಲಿ ಲಕ್ಷಾಂತರ ಮಂದಿ ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಘ ಸಂಸ್ಥೆಗಳು ಶುದ್ದ ಕುಡಿಯುವ ನೀರಿನ ಘಟಕಗಳನ್ನು ಒದಗಿಸಲು ಮುಂದಾಗಬೇಕೆಂದು ಹೇಳಿದರು. ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ಅಗತ್ಯವಿರುವ ಸಹಾಯ ಹಸ್ತವನ್ನು ವರ್ತಕರು ನೀಡಲಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವರ್ತಕರಾದ ಶಿವಕುಮಾರ್ ಶರ್ಮ, ಅನಿಲ್ ಬೇಕಲ್, ಕಿಶೋರ್ ಪಟೇಲ್, ಮುರಳೀದರ್ ರಮಣಿ, ಕಿಶಾನ್ ಪುರೋಹಿತ್, ಕಿಶೋರ್ ಚಾವ್ಲ ಉಪಸ್ಥಿತರಿದ್ದರು.

Write A Comment