ಕರಾವಳಿ

ಮಣಿಪಾಲ : ಎಂಐಟಿ   ವಿದ್ಯಾರ್ಥಿ ಆತ್ಮಹತ್ಯೆ : ಶಿಕ್ಷಣದಲ್ಲಿ ಹಿನ್ನೆಡೆ ಆತ್ಮಹತ್ಯೆಗೆ ಕಾರಣ

Pinterest LinkedIn Tumblr

ಉಡುಪಿ : ಮಣಿಪಾಲದ ಎಂಐಟಿ ಕಾಲೇಜಿನಲ್ಲಿ ಎಂ.ಟೆಕ್‌ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.

ಆತ್ಮಹತ್ಯೆ  ಮಾಡಿಕೊಂಡ ವಿದ್ಯಾರ್ಥಿ ಬಾಗಲಕೋಟೆ ಮೂಲದ ಅಭಿಜಿತ್‌ ಆರ್‌ (23) ಎಂದು ತಿಳಿದು ಬಂದಿದೆ.

Manipala_MIT Student_Death

ಅಭಿಜಿತ್‌ ಪ್ರಥಮ ವರ್ಷದ ಎಂ.ಟೆಕ್‌ ವ್ಯಾಸಾಂಗ ಮಾಡುತ್ತಿದ್ದು, ಶಿಕ್ಷಣದಲ್ಲಿ ಹಿನ್ನೆಡೇ ಕಂಡುಕೊಂಡ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಡೆತ್‌ನೋಟ್‌ ಬರೆದಿಟ್ಟಿದ್ದಾನೆ.

ಅಭಿಜಿತ್‌ನ ತಂದೆ ಹಾಗೂ ತಾಯಿ ಇಬ್ಬರೂ ವೈದ್ಯ ವೃತ್ತಿ ನಡೆಸುತ್ತಿದ್ದಾರೆ.

ಸ್ಥಳಕ್ಕೆ ಉಡುಪಿ ಎಸ್‌ಪಿ ಪಿ.ರಾಜೇಂದ್ರ ಪ್ರಸಾದ್‌ ಸೇರಿದಂತೆ ಮಣಿಪಾಲ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

 

Write A Comment