ಕರಾವಳಿ

ಗಂಗೊಳ್ಳಿ: ಮುಹರ್ರಮ್-ದ್ವಾದಶಿ ಪ್ರಯುಕ್ತ ಅನಾಥ ನಿರ್ಗತಿಕರಿಗೆ ಊಟ-ಹಣ್ಣು ಹಂಪಲು ವಿತರಣೆ

Pinterest LinkedIn Tumblr
ಕುಂದಾಪುರ: ಇತ್ತೀಚೆಗೆ ಹೊಂದಿದ ಗಂಗೊಳ್ಳಿ ಜಾಮಿಯಾ ಮೊಹಲ್ಲಾದ ನಿವಾಸಿ ಯುವಕ, ಸಮಾಜ ಸೇವಕ ಹಾಗೂ 24/7 ಹೆಲ್ಪ್ ಲೈನ್ ಗಂಗೊಳ್ಳಿ ಇದರ ಸಕ್ರಿಯ ಕಾರ್ಯಕರ್ತ ದಿವಂಗತ ಮುಹಮ್ಮದ್ ಸುಹೈಲ್ ಸ್ಮರಣಾರ್ಥ ಆತನ ಮಿತ್ರರು ಇಂದು ಮುಹರ್ರಮ್ ಹಾಗೂ ದ್ವಾದಶಿ ಹಬ್ಬದ ಪ್ರಯುಕ್ತ ಕುಂದಾಪುರದಿಂದ ಶಿರೂರು ತನಕದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ವಾಸವಾಗಿರುವ ಅನಾಥ, ನಿರ್ಗತಿಕ ಹಾಗೂ ಮಾನಸಿಕ ಅಸ್ವಸ್ಥರಿಗೆ ಮಧ್ಯಾಹ್ನದ ಊಟ, ನೀರು, ಹಣ್ಣು ಹಂಪಲು, ತಂಪು ಪಾನೀಯ , ಬಿಸ್ಕಿಟ್ ಪ್ಯಾಕ್ ಹಾಗೂ ಇನ್ನಿತರ ವಸ್ತುಗಳನ್ನು ವಿತರಿಸಿದರು.
Gangolli_Fruits_Distrubution Gangolli_Fruits_Distrubution (1) Gangolli_Fruits_Distrubution (2)
ಹಾಗೂ ಮುಂದಿನ ದಿನಗಳಲ್ಲಿ ಅನಾಥಾಶ್ರಮದ ಅಧಿಕಾರಿಗಳೊಂದಿಗೆ ಮಾತನಾಡಿ ಅವರಿಗೆ ಅಲ್ಲಿ ವ್ಯವಸ್ಥೆ ಕಲ್ಪಿಸುವ ಇರಾದೆಯನ್ನೂ ಮಾಡಿದ್ದಾರೆ… ಈ ಸಂಧರ್ಭದಲ್ಲಿ ಮೊಹಮ್ಮದ್ ತಾಜಿಂ ಎಂ ಎಚ್, ಆಹ್ತಶಾಂ ಎಂ ಎಚ್, ಜಿ ಮೊಹಮ್ಮದ್ ಅಫ್ವಾನ್, ಮುಜಾಹಿದ್ ಮೌಲಾನಾ ಹಾಗೂ ದಿವಂಗತ ಮುಹಮ್ಮದ್ ಸುಹೈಲ್ ಸಹೋದರ ಮೊಹಮ್ಮದ್ ಅಬ್ರಾರ್ ಜೊತೆಗಿದ್ದರು.

Write A Comment