ಬಂಟ್ವಾಳ, ನ.01 : ಇಲ್ಲಿನ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಆಕ್ರಮವಾಗಿ ಮರದ ದಿಮ್ಮಿಗಳನ್ನುಸಾಗಿಸುತ್ತಿದ್ದ ಲಾರಿಯನ್ನು ಕಲ್ಲಡ್ಕ ಶಾಖಾ ಉಪವಲಯ ಅರಣ್ಯಧಿಕಾರಿಯವರು ಅಮಾನತುಪಡಿಸಿ ಕೇಸು ದಾಖಲಿಸಿದ್ದಾರೆ.
ಆರೋಪಿ ವಾಹನ ಚಾಲಕ ನಾರಾಯಣ ರೈ ಅವರನ್ನು ದಸ್ತಗಿರಿ ಮಾಡಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ವಾಹನ ಮತ್ತು ಮರದ ಅಂದಾಜು ಮೌಲ್ಯ 4ಲಕ್ಷ ಬಂಟ್ವಾಳ ವಲಯ ಅರಣ್ಯಾಧಿಕಾರಿವರ ನಿರ್ದೇಶನದಂತೆ ಕಾರ್ಯಚರಣೆ ಮಾಡಲಾಗಿದೆ. ಕಾರ್ಯಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಹೆಚ್.ವಿ. ರಮೇಶ್, ಅರಣ್ಯ ರಕ್ಷಕರಾದ ದೇಜಪ್ಪ,ನವೀನಕುಮಾರ್, ಸಿಬ್ಬಂದಿಗಳಾದ ಜಯರಾಮ್, ಪ್ರವೀಣ ಭಾಗವಹಿಸಿದ್ದರು.