ಕರಾವಳಿ

ಮಂಗಳಾ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಮತ್ತೆ ಲೈಂಗಿಕ ದೌರ್ಜನ್ಯದ ಕರಿನೆರಳು :ಪ್ರಾಧ್ಯಾಪಕನಿಂದ ಲೈಂಗಿಕ ದೌರ್ಜನ್ಯ ಆರೋಪಿಸಿ ಯುವತಿಯಿಂದ ಮೌನ ಪ್ರತಿಭಟನೆ

Pinterest LinkedIn Tumblr

konaje_university_case_1

ಮಂಗಳೂರು,ಅ.೨೯: ಪ್ರಾಧ್ಯಾಪಕನಿಂದ ನಿರಂತರ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿರುವ ಯುವತಿಯೋರ್ವಳು ನ್ಯಾಯಕ್ಕಾಗಿ ಒತ್ತಾಯಿಸಿ ವಿಶ್ವವಿದ್ಯಾಲಯದ ಪ್ರಾಂಗಣದಲ್ಲಿ ಕುಳಿತು ಮೌನ ಪ್ರತಿಭಟನೆಯಲ್ಲಿ ತೊಡಗಿರುವ ಅಪರೂಪದ ಘಟನೆ ಬುಧವಾರ ಮುಂಜಾನೆ ನಡೆದಿದೆ. ಇಲ್ಲಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ವೇದವ ಎಂಬವರು ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ನಿರಂತರ ಅತ್ಯಾಚಾರ ನಡೆಸಿದ್ದಾರೆ ಎಂದು ಯುವತಿ ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾಳೆ.

konaje_university_case_2konaje_university_case_5

ಯುವತಿಗೆ ವಿಶ್ವವಿದ್ಯಾಲಯದ ಕನ್ನಡ ಭಾಷಾಭಿವೃದ್ಧಿ ಯೋಜನೆ ಅಡಿ ಕೊಡವ ಭಾಷಾಧ್ಯಯನ ಮಾಡುತ್ತಿದ್ದ ಸಂದರ್ಭ ಡಾ.ವೇದವ ಅವರ ಪರಿಚಯವಾಗಿತ್ತು. `ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವೇದವ ಎಂಬವರು 2013ರ ಜೂನ್ 2ರಂದು ಬಂಟ್ವಾಳ ತಾಲೂಕಿನ ಕೈಕುಂಜೆಯಲ್ಲಿರುವ ನನ್ನ ಮನೆಗೆ ಬಂದಿದ್ದರು. ಅಂದು ಮನೆಯಲ್ಲಿ ಯಾರೂ ಇರಲಿಲ್ಲ, ಈ ವೇಳೆ ಅವರು ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಈ ಬಗ್ಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದರು. ಆಮೇಲೆ ನನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಎಲ್ಲಾ ಕಡೆ ಸುತ್ತಾಡಿಸಿದ್ದಾರೆ’ ಎಂದು ಯುವತಿ ವಿ.ವಿ. ಕುಲಪತಿ ಪ್ರೊ.ಕೆ.ಭೈರಪ್ಪ ಅವರಿಗೆ ನೀಡಿದ ದೂರಿನಲ್ಲಿ ವಿವರಿಸಿರುವುದಾಗಿ ಯುವತಿ ಮಾದ್ಯಮಕ್ಕೆ ತಿಳಿಸಿದ್ದಾಳೆ.

konaje_university_case_6 konaje_university_case_4akonaje_university_case_4aa

ಪ್ರಾಧ್ಯಾಪಕನಿಂದಲೇ ನಿರಂತರ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿರುವ ಯುವತಿ ನ್ಯಾಯಕ್ಕಾಗಿ ಒತ್ತಾಯಿಸಿ ವಿಶ್ವವಿದ್ಯಾಲಯದ ಪ್ರಾಂಗಣದಲ್ಲಿ ಕೂತು ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ. `ಡಾ.ವೇದವ… ಯೂ ಹ್ಯಾವ್ ಚೀಟೆಡ್ ಮಿ… ಯೂ ಹ್ಯಾವ್ ಡನ್ ಇನ್‍ಜಸ್ಟೀಸ್ ಟು ಮಿ… ಐ ವಾಂಟ್ ಜಸ್ಟೀಸ್ ಫ್ರಂ ಯೂ..’ ಎಂದು ಬರೆದಿರುವ ಬೋರ್ಡ್ ಹಿಡಿದು ಯುವತಿ ವಿ.ವಿ. ಮುಂದೆ ಕುಳಿತು ಪ್ರತಿಭಟನೆಯಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಎಲ್ಲಾ ಮಾಹಿತಿಗಳನ್ನು ಪಡೆದು ತನಿಖೆ ನಡೆಸುವ ಭರವಸೆಯನ್ನು ವಿ.ವಿ. ಕುಲಪತಿ ನೀಡಿದ್ದಾರೆ.

ವೇದವ ಅವರು ಅತ್ಯಾಚಾರ ನಡೆಸಿದ ಬಗ್ಗೆ ಯುವತಿ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಪ್ರಕರಣವನ್ನು ಬಂಟ್ವಾಳ ಠಾಣೆಗೆ ವರ್ಗಾಯಿಸಲಾಗಿದೆ ಎಂದು ತಿಳಿದು ಬಂದಿದೆ.

1 Comment

  1. ಎಲ್ಲಿ ಅಡಗಿ ಕೂತಿದ್ದಾರ …?
    ಜಾತಿ ವಿಷಯದಲ್ಲಿ ವಿಷ ಬೆರೆಸಿ ಗಲಾಟೆ ದೊಂಬಿ ಲೂಟಿ ಮಾಡುವ ಈ ಮೂರ್ಖರು ಸ್ವಲ್ಪ ಎಚ್ಚೆತ್ತು ಇಂತ ಬಡ ಹುಡುಗಿಗೆ ನ್ಯಾಯ ದೊರಕಿಸಲಿ…ತಮ್ಮ ತಮ್ಮಕೇಸರಿ ಧ್ವಜಗಳನ್ನು ಸ್ವಲ್ಪ ಹೊರಗೆ ತಂದು ಒಂದು ಪ್ರತಿಭಟನೆ ಮಾಡಲಿ…

Write A Comment