ಕರಾವಳಿ

ಹಿಂದೂ ಯುವತಿಯ ಜೊತೆ ಸುತ್ತಾಟ : ಅನ್ಯಕೋಮಿನ ಯುವಕನ ಮೇಲೆ ಹಲ್ಲೆ : ಆರು ಮಂದಿ ಸೆರೆ

Pinterest LinkedIn Tumblr

Nantur_Moral_police

ಮಂಗಳೂರು,ಅ.28: ಹಿಂದೂ ಯುವತಿಯ ಜೊತೆ ಸುತ್ತುತ್ತಿದ್ದ ಅನ್ಯಕೋಮಿನ ಯುವಕನ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಅ.27 ರಂದು ಸಂಜೆ ನಂತೂರಿನಲ್ಲಿ ಸಂಭವಿಸಿದ್ದು,ಈ ಬಗ್ಗೆ ಆರು ಮಂದಿಯನ್ನು ಕದ್ರಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಸಿಟಿ ಸೆಂಟರ್ ಮಾಲ್‌ನ ಪೂಟ್ ವೇರ್ ಮಳಿಗೆಯೊಂದರಲ್ಲಿ ಉದ್ಯೋಗಿಯಾಗಿರುವ ಹಿಂದೂ ಯುವತಿಯನ್ನು ಅದೇ ಮಳಿಗೆಯಲ್ಲಿ ಉದ್ಯೋಗಿಯಾಗಿರುವ ಅನ್ಯ ಕೋಮಿನ ಯುವಕ ಅ.೨೭ ರಂದು ಸಂಜೆ ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ನಂತೂರು ಬಳಿ ಅನ್ಯಕೋಮಿನ ಪುರುಷನ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರು ಹಲ್ಲೆ ನಡೆಸಿದ ಬಗ್ಗೆ ಪ್ರಕರಣ ದಾಖಲಾಗಿತ್ತು.

ಹಲ್ಲೆಗೊಳಗಾದ ವ್ಯಕ್ತಿ ಒಂದು ಮಗುವಿನ ತಂದೆಯಾಗಿದ್ದು ಹಳೆಯಂಗಡಿಯ ನಿವಾಸಿ ಝಬೆಯುಲ್ಲ ಎಂದು ಗುರುತಿಸಲಾಗಿದೆ. ೨೦ರ ಹರೆಯದ ಯುವತಿ ಕೊಡಗು ಮೂಲದವಳು ಎನ್ನಲಾಗಿದೆ. ಇಬ್ಬರು ಸಿಟಿ ಸೆಂಟರ್ ಮಾಲ್‌ನಲ್ಲಿರುವ ಪೂಟ್ ವೇರ್ ಸಂಸ್ಥೆಯ ಉದ್ಯೋಗಿಗಳಾದ್ದು, ಕೆಲವು ಸಮಯಗಳಿಂದ ಜತೆಯಾಗಿ ಒಡಾಡುತ್ತಿದ್ದರು. ಅ.೨೭ ರಂದು ಸಂಜೆ ಯುವತಿಗೆ ಡ್ರಾಪ್ ಕೊಡುವ ನೆಪದಲ್ಲಿ ಬೈಕ್ ನಲ್ಲಿ ನಂತೂರು ಕಡೆಗೆ ಹೋಗುತ್ತಿದ್ದಾಗ ಹಿಂದೂ ಸಂಘಟನೆಯ ಕಾರ್ಯಕರ್ತರು ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣಕ್ಕೆ ಸಮ್ಮಂದ ಪಟ್ಟಂತೆ ಪ್ರವೀಣ್, ದೀಪಕ್, ಪ್ರಸಾದ್, ಅರುಣ್, ಯುವರಾಜ್, ರಕ್ಷಿತ್ ಎಂಬ ಆರು ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Write A Comment