ಕರಾವಳಿ

“ಮನೆಯೊಳಗಾಡೋ ಗೋವಿಂದ’ ಆಡಿಯೋ ಸಿಡಿ ಬಿಡುಗಡೆ

Pinterest LinkedIn Tumblr

ವರದಿ : ಈಶ್ವರ ಎಂ. ಐಲ್ / ಚಿತ್ರ : ದಿನೇಶ್ ಕುಲಾಲ್

 Mumbai_aoudio_cd_1

ಮುಂಬಯಿ: ವಿನಯ ಸಂಜಯ ಅಸೋಸಿಯೇಟ್ಸ್‌ ಹಾಗೂ ಚಾರ್‌ಕೋಪ್‌ ಕನ್ನಡಿಗರ ಬಳಗದ ಜಂಟಿ ಆಯೋಜನೆಯಲ್ಲಿ ಗಾಯಕಿ ಅಪರ್ಣಾ ಭಟ್‌ ಅವರ “ಮನೆಯೊಳಗಾಡೋ ಗೋವಿಂದ’ ದಾಸಗೀತೆಗಳ ಆಡಿಯೋ ಸಿಡಿ ಬಿಡುಗಡೆ ಸಮಾರಂಭವು ಅ. 18ರಂದು ಕಾಂದಿವಲಿ ಪಶ್ಚಿಮದ ಮಹಾವೀರ ನಗರದ ಕಮಲವಿಹಾರ ಸ್ಪೊರ್ಟ್ ಕ್ಲಬ್ ನ ಬೇಸ್‌ಮೆಂಟ್‌ ಸಭಾಂಗಣದಲ್ಲಿ ಜರಗಿತು.

ಶ್ರೀಕೃಷ್ಣ ವಿಠಲ ಪ್ರತಿಷ್ಠಾನದ ಸಂಸ್ಥಾಪಕ ವಿದ್ವಾನ್‌ ಕೈರಬೆಟ್ಟು ವಿಶ್ವನಾಥ್‌ ಭಟ್‌ ಸಿಡಿಯನ್ನು ಬಿಡುಗಡೆಗೊಳಿಸಿದರು.

ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದು ಅಪರ್ಣಾ ಭಟ್‌ ಅವರ ಸಾಧನೆ ಮಹಾರಾಷ್ಟ್ರದಲ್ಲಿ ಮಾತ್ರವಲ್ಲದೆ ಕರ್ನಾಟಕದಲ್ಲೂ ಗುರುತಿಸುವಂತಾಗಲಿ ಎಂದರು.

Mumbai_aoudio_cd_2 Mumbai_aoudio_cd_3 Mumbai_aoudio_cd_4 Mumbai_aoudio_cd_5 Mumbai_aoudio_cd_6 Mumbai_aoudio_cd_7 Mumbai_aoudio_cd_8 Mumbai_aoudio_cd_9

 ಗೌ| ಅತಿಥಿಗಳಾಗಿ ಚಾರ್‌ಕೋಪ್‌ ಕನ್ನಡಿಗರ ಬಳಗದ ಅಧ್ಯಕ್ಷ ಮಂಜುನಾಥ ಜಿ. ಬನ್ನೂರು ಉಪಸ್ತಿತರಿದ್ದು ಶುಭ ಹಾರೈಸಿದರು.

ಹವ್ಯಕ ವೆಲ್ಫ಼ೇರ್ ಟ್ರಸ್ಟ್‌ನಅಧ್ಯಕ್ಷ ಎನ್‌. ಆರ್‌. ಹೆಗಡೆ, ಚಲನಚಿತ್ರ ನಿರ್ದೇಶಕ ಪಿ. ಎನ್‌. ರಾಮಚಂದ್ರ,ಶೇಖರ ಸಸಿಹಿತ್ಲು, ಪದ್ಮನಾಭ ಸಸಿಹಿತ್ಲು ಮೊದಲಾದವರು ಉಪಸ್ಥಿತರಿದ್ದು ಅಪರ್ಣಾ ಭಟ್ ಅವರ ಸಾಧನೆಯನ್ನು ಮೆಚ್ಚಿದರು.

ಸಿಎ ವಿನಯ ಭಟ್ ಸ್ವಾಗತಿಸಿದರು. ಶಶಿಕಲಾ ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದ್ದು ರಘುನಾಥ್ ಶೆಟ್ಟಿ ವಂದಿಸಿದರು.

ಅಮಿತಾ ಕಲಾ ಮಂದಿರ ಮೀರಾರೋಡ್‌ ಸದಸ್ಯರಿಂದ ನೃತ್ಯ ವೈಭವ, ಕು| ಅಂಕಿತಾ ನಾಯ್ಕ ಮತ್ತು ಸೌಜನ್ಯಾ ಬಿಲ್ಲವ ಅವರಿಂದ ನೃತ್ಯ ಕಾರ್ಯಕ್ರಮ ಜರಗಿತು.

Write A Comment