ಕುಂದಾಪುರ: ಅಲ್ಬಾಡಿ ಗ್ರಾಮದ ಆರ್ಡಿ ಬಳಿ ಅಕ್ರಮವಾಗಿ ಮದ್ಯಮಾರಾಟ ಮನೆಯೊಂದಕ್ಕೆ ದಾಳಿ ನಡೆಸಿದ ಪೊಲೀಸರು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಮದ್ಯದ ಬಾಟಲಿ ಹಾಗೂ ನಗದು, ಪರಿಕರಗಳನ್ನು ವಶಕ್ಕೆ ತೆಗೆದುಕೊಂಡಿದ್ದು ಆರೋಪಿ ಶ್ಯಾಮ ಶೆಟ್ಟಿಯನ್ನು ಬಂಧಿಸಿದ್ದಾರೆ.
ಮನೆಯ ತೆರೆದ ಚಾವಡಿಯಲ್ಲಿ ಮದ್ಯಮಾರಾಟಮಾಡಲು ತೆಗೆದಿರಿಸಲಾದ ವಿವಿಧ ರೀತಿಯ ಮದ್ಯದ ಬಾಟಲಿಗಳು, ಖಾಲಿ ಬಾಟಲಿಗಳು ಅಲ್ಯುಮಿನಿಯಂ ಕೊಡಪಾನ, ಸ್ಟೀಲ್ ಲೋಟ ಹಾಗೂ ಮದ್ಯ ಮಾರಾಟ ಮಾಡಿ ಸಂಗ್ರಹಿಸಿದ ನಗದು ರೂ. 470ನ್ನು ಪಂಚನಾಮೆಯ ಮೂಲಕ ವಶಪಡಿಸಿಕೊಳ್ಳಲಾಗಿದೆ. ಶಂಕರನಾರಾಯಣ ಪೊಲೀಸ್ ಉಪನಿರೀಕ್ಷಕ ದೇಜಪ್ಪ ಹಾಗೂ ಅವರ ತಂಡ ಕಾರ್ಯಾಚರಣೆ ನಡೆಸಿದ್ದರು.ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.