ಮಂಗಳೂರು, ಅ.15: ನಗರದ ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಅ.16ರಿಂದ 19ರವರೆಗೆ 32ನೆ ಆಲ್ ಇಂಡಿಯಾ ಬುಡೋಕಾನ್ ಕರಾಟೆ ಚಾಂಪಿಯನ್ಶಿಪ್ -2014 ನಡೆಯಲಿದೆ ಎಂದು ಟೂರ್ನಿಯ ಸಂಯೋಜಕ ಪ್ರವೀಣ್ ಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಅಲೈಡ್ ಆರ್ಟ್ಸ್ ತನ್ನ ಬೆಳ್ಳಿ ಹಬ್ಬದ ಪ್ರಯುಕ್ತ ಈ ಟೂರ್ನಿಯ ಆತಿಥ್ಯ ವಹಿಸಿಕೊಂಡಿದೆ.
ದೇಶದ 22 ರಾಜ್ಯಗಳಿಂದ ಒಟ್ಟು 2000 ಸ್ಪರ್ಧಿಗಳು ಟೂರ್ನಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಸಬ್ ಜೂನಿಯರ್ (12 ವರ್ಷದೊಳಗಿನ), ಜೂನಿಯರ್ (12- 18 ವಯೋಮಿತಿಯ) ಮತ್ತು ಸೀನಿಯರ್ಸ್ (18 ವರ್ಷ ಮೇಲ್ಪಟ್ಟವರು) ವಿಭಾಗಗಳಲ್ಲಿ ಸ್ಪರ್ಧೆ ನಡೆಯುವುದು.
ವೈಯುಕ್ತಿಕ ಕಟಾ, ತಂಡ ಕಟಾ, ವೆಪನ್ ಕಟಾ, ವೈಯುಕ್ತಿಕ ಕುಮಿಟೆ ಮತ್ತು ರೊಟೇಶನ್ ಟೀಮ್ ಕುಮಿಟೆ ವಿಭಾಗಗಳಲ್ಲಿ ಸ್ಪರ್ಧೆ ನಡೆಯುವುದು . ಮುಖ್ಯಮಂತ್ರಿ ಸಿದ್ದರಾಮಯ್ಯ ಟೂರ್ನಿ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಸಚಿವರಾದ ಯು.ಟಿ. ಖಾದರ್, ಸಂಸದ ನಳಿನ್ ಕುಮಾರ್ ಕಟೀಲು ಭಾಗವಹಿಸುವರು ಎಂದರು. ಸ್ವಾಗತ ಸಮಿತಿಯ ಕಾರ್ಯನಿರ್ವಾಹಕ ಚಯರ್ಮೆನ್ ರಾಜರತ್ನ ಸನಿಲ್, ಅಧ್ಯಕ್ಷ ಪ್ರಭಾಕರ ಸುವರ್ಣ, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಆಳ್ವ ಉಪಸ್ಥಿತರಿದ್ದರು.