ಕರಾವಳಿ

ಕುಂದಾಪುರ ಯುವಕನ ಸಾವಿನ ಸುತ್ತ ಅನುಮಾನದ ಹುತ್ತ..? 

Pinterest LinkedIn Tumblr
ಕುಂದಾಪುರ: ಇಲ್ಲಿನ ಖಾರ್ವಿಕೇರಿ ರಸ್ತೆಯ ನದಿಯಲ್ಲಿ ಮೃತದೇಹವೊಂದು  ಮಂಗಳವಾರ ಸಂಜೆ  ಪತ್ತೆಯಾಗಿದ್ದು, ಮುಖದಲ್ಲಿ ರಕ್ತದ ಕಲೆಗಳಿದ್ದ ಕಾರಣ ಸ್ಥಳೀಯರು  ಇದೊಂದು ಕೊಲೆಯೆಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹಲವು ಅನುಮಾನಗಳಿದ್ದು ತನಿಖೆ ನಡೆಯುತ್ತಿದೆ.
Kundapur youth dead
ಕುಂದಾಪುರ ಕೆಳಕೇರಿ ಗಣಪತಿ ಖಾರ್ವಿ ಪುತ್ರ ಕುಮಾರ (26) ಎನ್ನಲಾಗಿದೆ. ಕುಮಾರ್ ಚಿಪ್ಪು ತೆಗೆಯುವ ಕೆಲಸ ಮಾಡುತ್ತಿದ್ದರು. ಮ್ರತ ಕುಮಾರ್ ಖಾರ್ವಿ ಕೆಲಸ ಮಾಡುತ್ತಿದ್ದಾಗ ನದಿಗೆ ಬಿದ್ದಿರಬಹುದೆಂಬ ಗುಮಾನಿಯೂ ಸದ್ಯ ಇದ್ದು ತನಿಖೆಯ ಬಳಿಕವಷ್ಟೇ ನಿಖರ ಮಾಹಿತಿ ತಿಳಿಯಲಿದೆ.

Write A Comment