ಕರಾವಳಿ

ಕುಂದಾಪುರ: ರೈಲಿನಿಂದ ಕೆಳಗಡೆ ಬಿದ್ದು ಗಾಯಗೊಂಡ ಯುವಕ ಸಾವು

Pinterest LinkedIn Tumblr

ಕುಂದಾಪುರ: ಮತ್ಸಗಂಧ ಎಕ್ಸ್-ಪ್ರೆಸ್ ರೈಲಿನಲ್ಲಿ ಭಟ್ಕಳದಿಂದ ಕೇರಳಕ್ಕೆ ಪ್ರಯಾಣಿಸುತ್ತಿದ್ದ ಯುವಕನೋರ್ವ ರೈಲಿನಿಂದ ಕೆಳಗಡೆ ಬಿದ್ದ ಪರಿಣಾಮ ಗಾಯಗೊಂಡು ಸಾವನ್ನಪ್ಪಿದ ಘಟನೆ ಕುಂದಾಪುರದ ಮೂಡ್ಲಕಟ್ಟೆ ಸಮೀಪ ಗುರುವಾರ ತಡರಾತ್ರಿ ನಡೆದಿದೆ.

Mahammad_Salman-Bhatkala

ಭಟ್ಕಳದ ಬದ್ರಿಯಾ ಕಾಲನಿ ನಿವಾಸಿ ಮಹಮ್ಮದ್ ಸಲ್ಮಾನ್ (19) ಮ್ರತ ಪ್ರಯಾಣಿಕನಾಗಿದ್ದು ಈತ ಕೇರಳದ ಕ್ಯಾಲಿಕಟ್ ನಲ್ಲಿ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಕೇರಳದಲ್ಲಿ ಕೆಲಸ ಮಾಡುತ್ತಿದ್ದ ಈತ ವಾರಗಳ ಹಿಂದಷ್ಟೇ ಭಟ್ಕಳದ ತನ್ನ ಮನೆಗೆ ಬಂದಿದ್ದು ಗುರ್ಉವಾರ ರಾತ್ರಿ ಮತ್ಸಗಂಧ ರೈಲಿನಲ್ಲಿ ಪುನಃ ಕೇರಳಕ್ಕೆ ತೆರಳುತ್ತಿದ್ದ ಎನ್ನಲಾಗಿದೆ. ರೈಲು ಸಾಗುತ್ತಿದ್ದ ವೇಳೆ ರೈಲಿನ ಹತ್ತುವ ಬಾಗಿಲ ಹತ್ತಿರ ಕುಳಿತಿದ್ದ ಈತ ಕುಂದಾಪುರದ ಮೂಡ್ಲಕಟ್ಟೆ ಸಮೀಪ ಬರುತ್ತಿದ್ದಂತೆಯೇ ಆಕಸ್ಮಿಕವಾಗಿ ಕೆಳಗಡೆ ಉರುಳಿದ್ದಾನೆ. ಕೂಡಲೇ ಆತನನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಕೂಡ ತೀವ್ರವಾಗಿ ಗಾಯಗೊಂಡಿದ್ದ ಆತ ಶುಕ್ರವಾರ ಮುಂಜಾನೆ ಸಾವನ್ನಪ್ಪಿದ್ದಾನೆ.

ಭಟ್ಕಳಕ್ಕೆ ಆತನ ಮ್ರತದೇಹವನ್ನು ರವಾನಿಸಲಾಗಿದೆ. ಸಲ್ಮಾನ್ ತಂದೆ ತಾಯಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾನೆ.

ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Write A Comment