ಕುಂದಾಪುರ: ಖ್ಯಾತ ನಟ, ಸಂಗೀತ ನಿರ್ದೇಶಕ ಗುರುಕಿರಣ್ ಶನಿವಾರ ಮಧ್ಯಾಹ್ನ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಸಹೋದರ ಹಾಗೂ ಕುಟುಂಬಿಕರ ಜೊತೆ ಆಗಮಿಸಿದ ಗುರುಕಿರಣ್ ಅವರನ್ನು ನೋಡಿ ನವರಾತ್ರಿ ಪ್ರಯುಕ್ತ ನೆರೆದಿದ್ದ ಪಾರ ಜನಸ್ತೋಮ ಗುರುಕಿರಣ್ ಅವರ ಜೊತೆ ನಿಂತು ಫೋಟೋ ಕ್ಲಿಕ್ಕಿಸಲು ಆರಂಭಿಸಿದ್ದಾರೆ. ತಾಯಿ ದರ್ಶನ ಮಾಡಿದ ಬಳಿಕ ಗುರುಕಿರಣ್ ಕೊಲ್ಲೂರಿನಿಂದ ತೆರಳಿದ್ದು ಮಾಧ್ಯಮಕ್ಕೆ ಸಿಕ್ಕಿಲ್ಲ.
ಗುರುಕಿರಣ್ ಅವರನ್ನು ದೇವಳದ ವತಿಯಿಂದ ಸ್ವಾಗತಿಸಲಾಯಿತು, ಈ ಸಂದರ್ಭ ದೇವಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಎಸ್. ಮಾರುತಿ, ಅಧೀಕ್ಷಕ ರಾಮಕ್ರಷ್ಣ ಅಡಿಗ, ವ್ಯವಸ್ಥಾಪನ ಸಮಿತಿ ಸದಸ್ಯ ಶ್ರೀನಿವಾಸ ಕಲ್ಲೂರಾಯ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.