ಕರಾವಳಿ

ಅಕ್ರಮ ಗೋವಧೆ ಸ್ಥಳಕ್ಕೆ ಪೊಲೀಸ್ ದಾಳಿ; ದಗಳ ರಕ್ಷಣೆ; ಆರೋಪಿ ಪರಾರಿ

Pinterest LinkedIn Tumblr

ಕುಂದಾಪುರ: ಹಬ್ಬದ ಸಲುವಾಗಿ ಮಾಂಸಕ್ಕಾಗಿ ದನಗಳನ್ನು ಕೂಡಿಹಾಕಿದ್ದ ಅಡ್ಡೆಗೆ ಕುಂದಾಪುರ ಪೊಲೀಸರು ದಾಳಿ ನಡೆಸಿ ಐದು ದನಗಳನ್ನು ವಶಪಡಿಸಿಕೊಂಡ ಘಟನೆ ತಾಲೂಕಿನ ಗುಲ್ವಾಡಿ ಗ್ರಾಮದಲ್ಲಿ ನಡೆದಿದೆ.

Illeagle_Cow_transport (7) Illeagle_Cow_transport (5) Illeagle_Cow_transport (4) Illeagle_Cow_transport (6) Illeagle_Cow_transport (8)

ಇಲ್ಲಿನ ನಿವಾಸಿ ಅಬುಬಕರ್ ಎಂಬಾತನೇ ಈ ಕುಕ್ರತ್ಯದ ರುವಾರಿಯಾಗಿದ್ದು, ಈ ಬಗ್ಗೆ ಸ್ಥಳೀಯರಿಂದ ಖಚಿತ ಮಾಹಿತಿ ಪಡೆದ ಕುಂದಾಪುರ ಪೊಲೀಸರು ಶುಕ್ರವಾರ ಸಂಜೆ ದಿಡೀರ್ ದಾಳಿ ನಡೆಸಿ 5  ದನಗಳನ್ನು ಪತ್ತೆ ಮಾಡಿದ್ದಾರೆ. ಇದರಲ್ಲಿ 2 ದನಗಳು ಸ್ಥಳೀಯರದ್ದೆಂದು ತಿಳಿದುಬಂದಿದ್ದು ಅವರು ಅದನ್ನು ಪುನಃ ಕೊಂಡುಹೋಗಿದ್ದಾರೆ. ಉಳಿದ ಮೂರು ದನಗಳನ್ನು ರಕ್ಷಣೆ

ಮಾಡಲಾಗಿದೆ. ಈ ವೇಳೆ ಆರೋಪಿ ಅಬುಬಕರ್ ಪರಾರಿಯಾಗಿದ್ದಾನೆ.
ಅಬುಬಕರ್ ಇದೇ ದಂಧೆ ಮಾಡುತ್ತಿದ್ದು, ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈತನ ಬಗ್ಗೆ ಗೋವಧೆ ಸಂಬಂಧಿ ಕೆಲ ಕೇಸುಗಳಿವೆ ಎನ್ನಲಾಗಿದೆ.

Write A Comment