ಕರಾವಳಿ

ಉಡುಪಿ ಶ್ರೀಕೃಷ್ಣಮಠದಲ್ಲಿ ಸ್ವಚ್ಛತಾ ಆಂದೋಲನ: ಪೊರಕೆ ಹಿಡಿದು ಗುಡಿಸಿದ ಕಾಣಿಯೂರು ಶ್ರೀ

Pinterest LinkedIn Tumblr

ಉಡುಪಿ: ಇಲ್ಲಿನ ಶ್ರೀಕೃಷ್ಣಮಠದಲ್ಲಿ ಗಾಂಧಿಜಯಂತಿ ಸಂದರ್ಭ ಸ್ವಚ್ಛತಾ ಆಂದೋಲನಕ್ಕೆ ಪರ್ಯಾಯ ಕಾಣಿಯೂರು ಶ್ರೀಗಳು ಚಾಲನೆ ನೀಡಿದರು.ಕೃಷ್ಣಮಠದಲ್ಲಿ ಬೆಳಿಗ್ಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶ್ರೀಗಳು, ಸ್ವತಃ ತಾವೂ ಪೊರಕೆ ಹಿಡಿದು ಕೃಷ್ಣಮಠವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಕೈಜೋಡಿಸಿದರು.

Udupi_kaniyuru_Shri

ಅಪಾರ ಭಕ್ತರ ಸಮ್ಮುಖ ಸ್ವಚ್ಛತೆಯಲ್ಲಿ ಪಾಲ್ಗೊಂಡ ಶ್ರೀಗಳು ,ಇದು ಗಾಂಧಿಜಯಂತಿಗೆ ಮಾತ್ರ ಸೀಮಿತವಾಗಿರಬಾರದು ಇದು ಮುಂದುವರೆಯಬೇಕು ಎಂದು ಹೇಳಿದರು.ಸ್ವಚ್ಛ ಭಾರತ ಎಂಬುದು ಗಾಂಧೀಜಿಯವರ ಕನಸು ಆ ಕನಸನ್ನು ಸಾಕಾರಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರು ಪಣ ತೊಟ್ಟಿದ್ದಾರೆ.

ದೇಶದ ಪ್ರತೀ ಮನೆ ,ಗ್ರಾಮ ,ಊರು ಸ್ವಚ್ಚಗೊಂಡರೆ ಜನರ ಮನಸ್ಸು ಸ್ವಚ್ಛಗೊಂಡಂತೆ, ಜನರ ಮನಸ್ಸು ಸ್ವಚ್ಛಗೊಳ್ಳಬೇಕಾರೆ ಈ ಆಂದೋಲನದ ಅಗತ್ಯ ಇದೆ ಆದರೆ ಇದು ಗಾಂಧಿ ಜಯಂತಿಯಂದು ಮಾತ್ರ ಸೀಮಿತವಾಗದೆ ನಿರಂತರ ಪ್ರಕ್ರಿಯೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಸ್ವಾಮೀಜಿಗಳ ಜೊತೆ ಕೃಷ್ಣಮಠಕ್ಕೆ ಆಗಮಿಸಿದ ಭಕ್ತರೂ ಕೂಡ ಸ್ವಚ್ಛತಾ ಆಂದೋಲನದಲ್ಲಿ ಕೈಜೋಡಿಸಿದರು.

Write A Comment