ಉಡುಪಿ: ಇಲ್ಲಿನ ಶ್ರೀಕೃಷ್ಣಮಠದಲ್ಲಿ ಗಾಂಧಿಜಯಂತಿ ಸಂದರ್ಭ ಸ್ವಚ್ಛತಾ ಆಂದೋಲನಕ್ಕೆ ಪರ್ಯಾಯ ಕಾಣಿಯೂರು ಶ್ರೀಗಳು ಚಾಲನೆ ನೀಡಿದರು.ಕೃಷ್ಣಮಠದಲ್ಲಿ ಬೆಳಿಗ್ಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶ್ರೀಗಳು, ಸ್ವತಃ ತಾವೂ ಪೊರಕೆ ಹಿಡಿದು ಕೃಷ್ಣಮಠವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಕೈಜೋಡಿಸಿದರು.
ಅಪಾರ ಭಕ್ತರ ಸಮ್ಮುಖ ಸ್ವಚ್ಛತೆಯಲ್ಲಿ ಪಾಲ್ಗೊಂಡ ಶ್ರೀಗಳು ,ಇದು ಗಾಂಧಿಜಯಂತಿಗೆ ಮಾತ್ರ ಸೀಮಿತವಾಗಿರಬಾರದು ಇದು ಮುಂದುವರೆಯಬೇಕು ಎಂದು ಹೇಳಿದರು.ಸ್ವಚ್ಛ ಭಾರತ ಎಂಬುದು ಗಾಂಧೀಜಿಯವರ ಕನಸು ಆ ಕನಸನ್ನು ಸಾಕಾರಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರು ಪಣ ತೊಟ್ಟಿದ್ದಾರೆ.
ದೇಶದ ಪ್ರತೀ ಮನೆ ,ಗ್ರಾಮ ,ಊರು ಸ್ವಚ್ಚಗೊಂಡರೆ ಜನರ ಮನಸ್ಸು ಸ್ವಚ್ಛಗೊಂಡಂತೆ, ಜನರ ಮನಸ್ಸು ಸ್ವಚ್ಛಗೊಳ್ಳಬೇಕಾರೆ ಈ ಆಂದೋಲನದ ಅಗತ್ಯ ಇದೆ ಆದರೆ ಇದು ಗಾಂಧಿ ಜಯಂತಿಯಂದು ಮಾತ್ರ ಸೀಮಿತವಾಗದೆ ನಿರಂತರ ಪ್ರಕ್ರಿಯೆಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಸ್ವಾಮೀಜಿಗಳ ಜೊತೆ ಕೃಷ್ಣಮಠಕ್ಕೆ ಆಗಮಿಸಿದ ಭಕ್ತರೂ ಕೂಡ ಸ್ವಚ್ಛತಾ ಆಂದೋಲನದಲ್ಲಿ ಕೈಜೋಡಿಸಿದರು.