ಉಳ್ಳಾಲ, ಸೆ. 27 : ಉಲ್ಲಾಳ ತೊಕ್ಕೊಟ್ಟಿನ ಬಳಿ ಫಾಸ್ಟ್ ಫುಡ್ ಅಂಗಡಿಯೊಂದರ ಗ್ಯಾಸ ಸಿಲಿಂಡರ್ಗೆ ಬೆಂಕಿ ತಗಲಿ ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಫಾಸ್ಟ್ಫುಡ್ ಅಂಗಡಿಯ ಹೊರಗೆ ಸಿಲಿಂಡರ್ ಇಟ್ಟು ಫಾಸ್ಟ್ಫುಡ್ ವ್ಯಾಪಾರ ವನ್ನು ಮಾಡಲಾಗುತ್ತಿತ್ತು. ಇದೇ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ನಲ್ಲಿ ಗ್ಯಾಸ್ ಮುಗಿದ ಹಿನ್ನೆಲೆಯಲ್ಲಿ ಫುಡ್ ತಯಾರಿಸುವ ಅಂಗಡಿಯಾತ ಬೇರೆ ಸಿಲಿಂಡರ್ ಜೋಡಿಸಲೆಂದು ಹೋದಾಗ ಸಿಲಿಂಡರ್ನ ವಾಷರ್ ಎದ್ದು ಹೋಗಿದ್ದು ಗ್ಯಾಸ್ ಹೊರಗಡೆ ಬಂದಾಗ ಇಡೀ ಸಿಲಿಂಡರಿಗೆ ಬೆಂಕಿ ತಗಲಿ ಈ ಅನಾಹುತ ನಡೆದಿದೆ.
ಗ್ಯಾಸ್ ಸಿಲಿಂಡರ್ನ ಬೆಂಕಿಯ ಜ್ವಾಲೆಯು ಪರಿಸರದ ಜನರಲ್ಲಿ ಆತಂಕವನ್ನು ಉಂಟು ಮಾಡಿತ್ತು. ಗ್ಯಾಸ್ ಸಿಲಿಂಡರ್ನ ಬೆಂಕಿ ನಂದಿಸಲು ಸ್ಥಳೀಯರು ಪ್ರಯತ್ನ ಪಟ್ಟರೂ ಆಗಲಿಲ್ಲ. ಸುಮಾರು 30 ನಿಮಿಷ ಗ್ಯಾಸ್ ಸಿಲಿಂಡರ್ ಬೆಂಕಿಯಲ್ಲಿ ಉರಿಯುತ್ತಿತ್ತು. ಬಳಿಕ ಸುದ್ದಿ ತಿಳಿದು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ನಂದಿಸಿದ ಪರಿಣಾಮ ದೊಡ್ಡದೊಂದು ದುರಂತ ತಪ್ಪಿದೆ.