ಕುಂದಾಪುರ: ಕಾಳಾವರ ವನದುರ್ಗಾದೇವಿ ದೇವಸ್ಥಾನ ಸಮೀಪದ ನಿವಾಸಿ ನಿವೃತ್ತ ಎಎಸ್ಐ ಗಣಪಯ್ಯ ಶೆಟ್ಟಿಗಾರ ಅವರ ಮೇಲೆ ಪಕ್ಕದ ಮನೆಯ ಬೀಚಮ್ಮ ಶಡ್ತಿ ಅವರ ಮಗ ರಘು ಶೆಟ್ಟಿ ಎಂಬುವವರು ಮನೆಯ ಅಂಗಳಕ್ಕೆ ಆಕ್ರಮವಾಗಿ ಪ್ರವೇಶಮಾಡಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ಇತ್ತೀಚೆಗೆ ನಡೆಯಿತು.
ಸುಮಾರು ಆರವತ್ತು ವರ್ಷಗಳಿಂದ ಅಡಿಕೆ, ತೆಂಗು ಕೃಷಿಮಾಡಿಕೊಂಡು ಅನುಭವದ ಮನೆ ಅಡಿ ಜಾಗದಲ್ಲಿ ಕೆಲಸದವರೊಂದಿಗೆ ತೆಂಗಿನ ಮರದ ಬುಡಮಾಡಲು ಸೊಪ್ಪು ಕಡಿಯುತ್ತಿರುವಾಗ ನೆರಮನೆಯ ಬೀಚಮ್ಮ ಶಡ್ತಿ, ಬಾಬಿ ಶಡ್ತಿ ಮತ್ತು ಮುತ್ತು ಶೆಡ್ತಿ ಎಂಬುವವರು ಸೊಪ್ಪು ಕಡಿಯುದಕ್ಕೆ ಆಕ್ಷೇಪ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಪ್ರಚೋಧನೆ ನೀಡಿದ್ದಾರೆ.
ರಘು ಶೆಟ್ಟಿ ಎಂಬುವವನು ಕೈಯಲ್ಲಿ ದೊಣ್ಣೆಯನ್ನು ಹಿಡಿದುಕೊಂಡು ಮನೆಯ ಅಂಗಳಕ್ಕೆ ಆಕ್ರಮವಾಗಿ ಪ್ರವೇಶಮಾಡಿ ಗಣಪಯ್ಯ ಶೆಟ್ಟಿಗಾರ ಅವರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿ ಪರಾರಿಯಾಗಿಯಾಗಿದ್ದಾನೆ.
ಹಲ್ಲೆಗೊಳಗಾದ ಗಣಪಯ್ಯ ಶೆಟ್ಟಿಗಾರರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುಂದಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.