ಕರಾವಳಿ

ನೀರಿನ ಟ್ಯಾಂಕಿಗೆ ಹಾರಿ ಮಹಿಳೆಯೊಬ್ಬಳು ಅತ್ಮಹತ್ಯೆ.

Pinterest LinkedIn Tumblr

sucide

ಬಂಟ್ವಾಳ; ಸಾಲದ ಚಿಂತೆಯಿಂದ ಬೇಸತ್ತ ಮಹಿಳೆಯೊಬ್ಬರು ನೀರಿನ ಟ್ಯಾಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಹೊರಂಗಳ ನಿವಾಸಿ ಮೋಹಿನಿ(50) ಎಂಬವರೇ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ರಾತ್ರಿ ಮನೆಯಲ್ಲಿ ಮಲಗಿದ್ದ ಇವರು ಬೆಳಗ್ಗೆ ನಾಪತ್ತೆಯಾಗಿದ್ದರು. ಮನೆಮಂದಿ ಇವರಿಗಾಗಿ ಮನೆಯ ಸುತ್ತಮುತ್ತ ಹುಡುಕಾಟ ನಡೆಸಿದ್ದು, 7.30 ರ ಸುಮಾರಿಗೆ ಮನೆ ಹತ್ತಿರವಿರುವ ಗ್ರಾ.ಪಂ. ನ ನೀರಿನ ಟ್ಯಾಂಕಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಟ್ಯಾಂಕಿಯ ಮುಚ್ಚಳ ತೆರೆದ ಸ್ಥಿತಿಯಲ್ಲಿದ್ದ ಕಾರಣ, ಅದನ್ನು ತೆರೆದು ನೋಡಿದಾಗ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಕಳೆದ 3 ತಿಂಗಳ ಹಿಂದೆ ಇವರ ಮಗಳ ಮದುವೆ ನಡೆದಿದ್ದು, ಇದಕ್ಕಾಗಿ ಸುಮಾರು 2 ಲಕ್ಷ ಕೈಸಾಲ ಮಾಡಿದ್ದರು. ಇದನ್ನು ತೀರಿಸಲು ಸಾಧ್ಯವಾಗದೆ, ಜೀವನದಲ್ಲಿ ಜಿಗೂಪ್ಸೆ ಹೊಂದಿ ಈ ಕೃತ್ಯವೆಸಗಿದ್ದಾರೆಂದು ಹೇಳಲಾಗಿದೆ. ಮೃತರ ಪುತ್ರ ಅಮಿತ್ ಕುಮಾರ್ ಎಂಬವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment