ಮಂಗಳೂರು,ಸೆ19 : ರಥಬೀದಿ ಶ್ರೀಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತಸೆ.24 ರಿಂದ ಸೆ.31 ರವರೆಗೆ ಪ್ರತಿದಿನ ಚಂಡಿಕಾಯಾಗ ಜರಗಲಿದೆ. ಚಂಡಿಕಾಯಾಗದಲ್ಲಿ ಭಾಗವಹಿಸಲಿಚ್ಘಿಸುವ ವಿಶ್ವ ಬ್ರಾಹ್ಮಣ ಸಮಾಜ ಬಾಂಧವರು ರೂ 3000/- ಶ್ರೀ ಕ್ಷೇತ್ರದ ಕೌಂಟರ್ ನಲ್ಲಿ ಪಾವತಿಸಿ ರಶೀದಿ ಪಡೆದು ಸೇವೆಯ ದಿನದಂದು ಬೆಳಗ್ಗೆ 7 ಗಂಟೆಗೆ ದಂಪತಿ ಸಮೇತರಾಗಿ ಉಪಸ್ಥಿತರಿರಬೇಕು.
ಬೆಅಗ್ಗೆ 10.30 ಕ್ಕೆ ಪೂರ್ಣಾಹುತಿ ಪ್ರಸಾದ ವಿತರಣೆ. ಹಾಗೂ ಶ್ರೀಕ್ಷೇತ್ರದ ವತಿಯಿಂದ ಅ.4 ಕ್ಕೆ ಚಂಡಿಕಾಯಾಗ ಜರಗಲಿದೆ ವಿಶ್ವ ಬ್ರಾಹ್ಮಣ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರಾದ ಕೆ.ಲೋಕೇಶ್ ಆಚಾರ್ಯ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.