ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದಿಂದ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸುವ ಮೂಲಕ ಪಾಕಿಸ್ತಾನದ ಎದೆಯಲ್ಲಿ ನಡುಕ ಮೂಡಿಸಿದೆ. ಹೌದು ಪಾಕ್ ಆಕ್ರಮಿತ ಕಾಶ್ಮೀರದ 30 ಕಿ.ಮೀ ಪ್ರದೇಶದಲ್ಲಿ ಭಾರತೀಯ ಯೋಧರು ಮತ್ತೊಮ್ಮೆ ದಾಳಿ ನಡೆಸಿದ್ದಾರೆ.
ಭಾರತ ನಡೆಸಿದ ದಾಳಿಗೆ ಉಗ್ರರ ಹಲವು ಅಡಗುತಾಣಗಳು ಉಡೀಸ್ ಆಗಿದ್ದು, ದಾಳಿಯಿಂದ ನೀಲಂ-ಝೇಲಂ ಜಲವಿದ್ಯುತ್ ಪ್ರಾಜೆಕ್ಟ್ಗೆ ಹಾನಿಯಾಗಿದೆ ಎನ್ನಲಾಗುತ್ತಿದೆ. ಹಿಂದಿನ ಸಲ ರಾತ್ರಿ ದಾಳಿ ನಡೆಸಿದ್ದ ಭಾರತ ಈ ಬಾರಿ ಹಾಡಹಗಲೇ ದಾಳಿ ನಡೆಸಿದ್ದು, ಉಗ್ರರ ಹುಟ್ಟಡಗಿಸಿದೆ.
ಭಾರತದ ಗಡಿ ದಾಟದೇ ದಾಳಿ ನಡೆಸಿರುವ ಸೈನಿಕರು, ಅತ್ಯಾಧುನಿಕ ಆರ್ಟಿಲರಿ ಗನ್ ಬಳಸಿ ದಾಳಿ ನಡೆಸಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಉಗ್ರರು ಭಾರತದ ಮೇಲೆ ದಾಳಿ ನಡೆಸಲು ಚಿಂತನೆ ನಡೆಸಿದ್ದರು ಎನ್ನಲಾಗಿದೆ. ಉಗ್ರರ ಟಾರ್ಗೆಟ್ ಅಮರನಾಥ ಯಾತ್ರಿಗಳಾಗಿದ್ದರೂ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಉಗ್ರರ ದಾಳಿಗೆ ಅವಕಾಶ ನೀಡದ ಸೈನಿಕರು ತಾವೇ ದಾಳಿ ನಡೆಸಿ ಉಗ್ರರ ಹುಟ್ಟಡಗಿಸಿದ್ದಾರೆ. ಇನ್ನು ಕಾಶ್ಮೀರದಲ್ಲಿ ಈಗಾಗಲೇ ಸೂಕ್ಷ್ಮ ಸ್ಥಿತಿ ನಿರ್ಮಾಣವಾಗಿದ್ದು, ಕಾಶ್ಮೀರದಿಂದ ಹೊರಹೋಗುವಂತೆ ಪ್ರವಾಸಿಗರಿಗೆ ಸೂಚಿಸಲಾಗಿದೆ. ಅಲ್ಲದೇ ಅಮೇರಿಕಾ ಕೂಡ ತನ್ನ ನಾಗರೀಕರಿಗೆ ಕಾಶ್ಮೀರ ಪ್ರವಾಸ ರದ್ದುಗೊಳಿಸುವಂತೆ ಸೂಚಿಸಿದೆ.
Comments are closed.